Politics

ಈಶ್ವರಪ್ಪ ವಿವಾದ : ಎರಡನೇ ದಿನವೂ ಮುಂದುವರೆದ ಅಹೋರಾತ್ರಿ ಧರಣಿ

ಬೆಂಗಳೂರು : ಸಚಿವ ಈಶ್ವರಪ್ಪನವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್‌ ನಾಯಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರೆದಿದೆ.

ಧರಣಿಯಲ್ಲಿ ಪಾಲ್ಗೊಂಡಿರುವ ಕೈನಾಯಕರು ನಿನ್ನೆ ರಾತ್ರಿ ನಡೆದ ಭಾರತ ವೆಸ್ಟ್‌ ಇಂಡೀಸ್‌ ನಡುವಿನ ಕ್ರಿಕೆಟ್‌ ಮ್ಯಾಚ್‌ ವೀಕ್ಷಣೆ ಮಾಡಿದ್ದಾರೆ. ಮೊದಲ ದಿನದಂತೆಯೇ ಎರಡನೇ ದಿನವೂ ಪ್ರತಿಭಟನಾ ನಿರತ ಕೈ ನಾಯಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿಜಯನಗರದ ಖಾಸಗಿ ಹೋಟೆಲ್‌ನಿಂದ ವೆಜ್‌ ಊಟವನ್ನು ತರಿಸಲಾಗಿತ್ತು.

ಈಶ್ವರಪ್ಪನವರನ್ನು ಶೀಘ್ರವಾಗಿ ವಜಾ ಮಾಡದಿದ್ದಲ್ಲಿ ಸೋಮವಾರದಿಂದ ಪ್ರತಿ ತಾಲೂಕುಗಳಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನಾ ರ್ಯಾಲಿ ನಡೆಸುತ್ತೇವೆ ಎಂದು ಡಿಕೆ ಶಿವಕುಮಾರ್‌ ಎಚ್ಚರಿಸಿದ್ದಾರೆ.

Share Post