LifestyleNationalPolitics

ಜ್ಯೋತಿಷಿ ವೇಣುಸ್ವಾಮಿ ಮೊರೆ ಹೋದ ರೇವಣ್ಣ ಕುಟುಂಬ

ಹೈದರಾಬಾದ್‌; ದೇವೇಗೌಡರ ಕುಟುಂಬ ದೇವರು, ಸ್ವಾಮೀಜಿಗಳು, ಜ್ಯೋತಿಷ್ಯರನ್ನು ಹೆಚ್ಚು ನಂಬುತ್ತದೆ. ಅವರು ಸೂಚಿಸಿದಂತೆ ನಡೆದುಕೊಳ್ಳುತ್ತದೆ. ಅದರಲ್ಲೂ ಮಾಜಿ ಸಚಿವ ರೇವಣ್ಣ ಅವರು ಪ್ರತಿಯೊಂದನ್ನೂ ಜ್ಯೋತಿಷ್ಯದ ಪ್ರಕಾರವೇ ಮಾಡೋದು. ಏನೇ ಮಾಡಬೇಕು ಅಂದುಕೊಂಡರೂ ದಿನ, ಸಮಯ ಎಲ್ಲವನ್ನೂ ನೋಡಿಯೇ ಮುಂದಡಿ ಇಡೋದು. ರೇವಣ್ಣ ಕುಟುಂಬ ಇದೀಗ ಹೈದರಾಬಾದ್‌ನಲ್ಲಿ ಸೆಲೆಬ್ರಿಟಿಗಳ ಜ್ಯೋತಿಷಿಯೆಂದೇ ಖ್ಯಾತಿಯಾಗಿರುವ ವೇಣುಸ್ವಾಮಿಯನ್ನು ಭೇಟಿಯಾಗಿದೆ.

ವೇಣುಸ್ವಾಮಿ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಸಿನಿಮಾ ನಟ, ನಟಿಯರು, ರಾಜಕಾರಣಿಗಳು ಇವರನ್ನು ನಂಬುತ್ತಾರೆ. ಇವರು ಹೇಳಿದಂತೆ ನಡೆಯುತ್ತಾರೆ. ಇವರು ಹೇಳಿದ್ದೇ ಆಗುತ್ತೆ ಎಂಬ ನಂಬಿಕೆಯೂ ಇದೆ. ಈ ಹಿನ್ನೆಲೆಯಲ್ಲಿಯೇ ರೇವಣ್ಣ ಅವರು ಪತ್ನಿ, ಪುತ್ರರ ಸಮೇತರಾಗಿ ಹೈದರಾಬಾದ್‌ಗೆ ತೆರಳಿ ವೇಣುಸ್ವಾಮಿಯವರನ್ನು ಭೇಟಿಯಾಗಿದ್ದಾರೆ. ವೇಣುಸ್ವಾಮಿ ಮಾರ್ಗದರ್ಶನದಲ್ಲಿ ಹಲವು ಪೂಜೆಗಳನ್ನು ಕೂಡಾ ಮಾಡಿದ್ದಾರೆ. ಅದರ ಫೋಟೋಗಳು ಈಗ ವೈರಲ್‌ ಆಗುತ್ತಿವೆ.

Share Post