International

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಏರ್‌ ಇಂಡಿಯಾ ಸಜ್ಜು

ನವದೆಹಲಿ : ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧದ ಛಾಯೇ ದಟ್ಟವಾಗಿದೆ. ಎಚ್ಚೆತ್ತ ಭಾರತ ಸರ್ಕಾರ ಭಾರತೀಯರಿಗೆ ಕೂಡಲೇ ದೇಶಕ್ಕೆ ಹಿಂತಿರುಗುವಂತೆ ಮನವಿ ಮಾಡಿಕೊಂಡಿದೆ.

ಉಕ್ರೇನ್‌ನಲ್ಲಿರುವ ಭಾರತ ಎಂಬೆಸ್ಸಿಗೂ ಸಹಾಯ ಮಾಡುವಂತೆ ಭಾರತ ಸರ್ಕಾರ ತಿಳಿಸಿದೆ. ಈ ಸಂದರ್ಭದಲ್ಲಿ ಭಾರತೀಯರನ್ನು ವಾಪಸ್‌ ಕರೆತರಲು ಏರ್‌ ಇಂಡಿಯಾ ಮುಂದಾಗಿದ್ದು ತಮ್ಮ ವಿಮಾನಗಳನ್ನು ನೆರವಿಗೆ ಕಳುಹಿಸಲು ನಿರ್ಧರಿಸಿದೆ. ವಿದ್ಯಾರ್ಥಿಗಳು ಆದ್ಯತೆ ಮೇರೆಗೆ ದೇಶವನ್ನು ಬಿಡುವಂತೆ ವಿದೇಶಾಂಗ ಇಲಾಖೆ ತಿಳಿಸಿದೆ.

ಈಗಾಗಲೇ ಏರ್‌ ಇಂಡಿಯ ತಮ್ಮ ಅಫಿಷಿಯಲ್‌ ವೆಬ್‌ಸೈಟ್‌ನಲ್ಲಿ ಬುಕಿಂಗ್‌ ಅನ್ನು ಈಗಾಗಲೇ ಆರಂಭಿಸಿದೆ. ಮೂರು ವಿಮಾನಗಳನ್ನು ಹಾರಾಟ ಮಾಡಲು ಏರ್‌ ಇಂಡಿಯ ತೀರ್ಮಾನಿಸಿದೆ.

Share Post