Politics

ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್‌ಗೆ 76 ಸಾವಿರ ಮತಗಳ ಭಾರೀ ಮುನ್ನಡೆ!

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ಗೆ ಭಾರಿ ನಿರಾಸೆಯಾಗಿದೆ.. ಅವರು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್‌ ಅವರು ಬರೋಬ್ಬರಿ 76 ಸಾವಿರ ಮತಗಳ ಮುನ್ನಡೆ ಪಡೆದಿದ್ದಾರೆ.. ಸತತ ಐದನೇ ಸುತ್ತಿನಲ್ಲೂ ಮಂಜುನಾಥ್‌ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ..

ಡಾ.ಸಿ.ಎನ್‌.ಮಂಜುನಾಥ್‌ ಸ್ಪರ್ಧೆಯ ಕಾರಣದಿಂದ ಬೆಂಗಳುರು ಗ್ರಾಮಾಂತರ ಕ್ಷೇತ್ರ ದೇಶದಲ್ಲೇ ಕುತೂಹಲ ಕೆರಳಿಸಿತ್ತು.. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರು ಸತತ ಮೂರನೇ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದರು.. ಆದ್ರೆ, ಫಲಿತಾಂಶ ಡಿ.ಕೆ.ಸುರೇಶ್‌ಗೆ ವ್ಯತಿರಿಕ್ತವಾಗುವ ಸಾಧ್ಯತೆ ಕಂಡುಬರುತ್ತಿದೆ..

Share Post