Politics

ಆಂಧ್ರಪ್ರದೇಶದಲ್ಲಿ ಜಗನ್‌ಗೆ ಭಾರಿ ಮುಖಭಂಗ; ಚಂದ್ರಬಾಬು, ಪವನ್‌ ಕಲ್ಯಾಣ್‌ ಜೋಡಿಗೆ ಗೆಲುವಿನ ಹಾರ!

ಅಮರಾವತಿ; ಆಂಧ್ರಪ್ರದೇಶದಲ್ಲಿ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಪಾರ್ಟಿ ಭಾರಿ ಮುಖಭಂಗ ಅನುಭವಿಸುತ್ತಿದೆ.. ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ 175 ಕ್ಷೇತ್ರಗಳಿದ್ದು, ಇದರಲ್ಲಿ ಕಳೆದ ಬಾರಿ ವೈಎಸ್‌ಆರ್‌ಸಿಪಿ 154 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.. ಆದ್ರೆ ಈ ಬಾರಿ ಕೇವಲ 21 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ..

ಆಂಧ್ರಪ್ರದೇಶದಲ್ಲಿ ಈ ಬಾರಿ ಪವನ್‌ ಕಲ್ಯಾಣ್‌ ಅವರ ಜನಸೇನಾ ಪಾರ್ಟಿ ಹಾಗೂ ಚಂದ್ರಬಾಬು ನಾಯ್ಡು ಅವರು ಟಿಡಿಪಿ ಪಾರ್ಟಿ ಭಾರೀ ಕಮಾಲ್‌ ಮಾಡಿದೆ.. ಟಿಡಿಪಿ ಇಲ್ಲಿ 104 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, 22 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರುವ ಜನಸೇನಾ ಪಾರ್ಟಿ 13 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ..

ಈಗಿನ ಟ್ರೆಂಡ್‌ ನೋಡಿದರೆ, ಸ್ಪಷ್ಟ ಬಹುಮತದೊಂದಿಗೆ ಟಿಡಿಪಿ ಹಾಗೂ ಜನಸೇನಾ ನೇತೃತ್ವದ ಒಕ್ಕೂಟ ಅಧಿಕಾರ ಹಿಡಿಯಲಿದೆ..

 

Share Post