DistrictsPolitics

ಬಿಜೆಪಿ – ಜೆಡಿಎಸ್‌ ಒಳ ಒಪ್ಪಂದ : ಸಿದ್ದರಾಮಯ್ಯ

ಕೋಲಾರ : ವಿಧಾನ ಪರಿಷತ್‌ ಚುನಾವಣೆಗೆ ಜೆಡಿಎಸ್‌ನ ಬೆಂಬಲ ಕೇಳುತ್ತೇವೆ. ಅವರು ಬೆಂಬಲಿಸುವ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಜೆಡಿಎಸ್‌ನವರ ಜೊತೆ ಮಾತನಾಡದೆ ಹೇಳಿದ್ದಾರಾ. ಮೈತ್ರಿ ಬಗ್ಗೆ ಯಾವುದೇ ಮಾತುಕತೆ ಆಗಿಲ್ಲ ಎಂದು ಕುಮಾರಸ್ವಾಮಿ ಹೇಳಿರುವುದಕ್ಕೆ ಏನು ಹೇಳಬೇಕು, ಬೆಂಕಿ ಇಲ್ಲದೆ ಹೊಗೆಯಾಡುತ್ತಾ, ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ʼರಾಜ್ಯ ವಿಧಾನ ಪರಿಷತ್ತಿನ ೨೫ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಆದರೆ, ಜೆಡಿಎಸ್‌ ೭ ಕಡೆ ಮಾತ್ರ ಅಭ್ಯರ್ತಿಗಳನ್ನು ಹಾಕಿದೆ. ಉಳಿದ ೧೮ ಕಡೆ ಜೆಡಿಎಸ್‌ ಏನು ಮಾಡುತ್ತಾರೆ ? ಹೊಂದಾಣಿಕೆ ಮಾತುಕತೆ ನಡೆದಿದೆ, ಇಲ್ಲಾಂದ್ರೆ ಯಡಿಯೂರಪ್ಪ ಯಾಕೆ ಹೇಳುತ್ತಾರೆʼ ಎಂದರು

 

Share Post