National

ವಿಶಾಖಪಟ್ಟಣಂ ಕಾರ್ಖಾನೆಯಲ್ಲಿ ಅಗ್ನಿ ದುರಂತ – 50ಲಕ್ಷಕ್ಕೂ ಹೆಚ್ಚಿನ ಹಾನಿ

ವಿಶಾಖಪಟ್ಟಣಂ : ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಯಲ್ಲಿ ಶನಿವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬ್ಲಾಸ್ಟ್ ಫರ್ನೇಸ್ ಪ್ಲಾಂಟ್-2ರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ದ್ರವರೂಪದ ಉಕ್ಕಿನ ಸೋರಿಕೆಯು ಬ್ಲಾಸ್ಟ್ ಫರ್ನೇಸ್ ಪ್ಲಾಂಟ್-2 ನಲ್ಲಿ ಭಾರಿ ಬೆಂಕಿಗೆ ಕಾರಣವಾಗಿರಬಹುದು. 

ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಬೆಂಕಿಯಲ್ಲಿ ಎರಡು ಲಾರಿಗಳು ಸುಟ್ಟು ಕರಕಲಾಗಿವೆ. ಆದರೆ, ಅಧಿಕಾರಿಗಳು ಪ್ರಾಥಮಿಕವಾಗಿ 50 ಲಕ್ಷ ರೂಪಾಯಿ ಆಸ್ತಿ ಹಾನಿಯಾಗಿದೆ ಎಂದು ಅಂದಾಜಿಸಿದ್ದಾರೆ. ಅಪಘಾತಕ್ಕೆ ಕಾರಣಗಳು ಏನೆಂದು ಇನ್ನು ತಿಳಿಯಬೇಕಿದೆ. 
ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. 

 

Share Post