CrimeNational

ಕಾರು ಕದ್ದ, ಅರ್ಧದಲ್ಲೇ ಬಿಟ್ಟು ಕ್ಷಮಾಪಣೆ ಪತ್ರ ಅಂಟಿಸಿದ!

ರಾಜಸ್ಥಾನ; ರಸ್ತೆ ಬದಿಯಲ್ಲಿ ಪಾರ್ಕ್‌ ಮಾಡಿದ್ದ ಬೈಕ್‌, ಕಾರುಗಳು ಆಗಾಗ ಕಳ್ಳತನ ಆಗುತ್ತಿರುತ್ತವೆ.. ಕೆಲವರು ಬಸ್‌, ಲಾರಿಗಳನ್ನೂ ಕೂಡಾ ಕಳ್ಳತನ ಮಾಡಿಕೊಂಡು ಹೋಗುತ್ತಾರೆ.. ಇಂತಹವರು ಬಹುತೇಕ ಒಂದಿಲ್ಲೊಂದು ದಿನ ಸಿಕ್ಕಿಬೀಳುತ್ತಾರೆ.. ಆದ್ರೂ ವಾಹನಗಳ ಕಳ್ಳತನ ಬಿಡೋದಿಲ್ಲ.. ಅದೇ ರೀತಿ ವ್ಯಕ್ತಿಯೊಬ್ಬ ಕಾರೊಂದನ್ನು ಕಳ್ಳತನ ಮಾಡಿದ್ದಾರೆ.. ಆದ್ರೆ ಅರ್ಧದಾರಿಗೆ ಹೋಗೋಷ್ಟರಲ್ಲಿ ಆತನಿಗೆ ಏನನಿಸಿತೋ ಗೊತ್ತಿಲ್ಲ.. ಕಾರು ಅಲ್ಲೇ ನಿಲ್ಲಿಸಿ, ಕಾರಿನ ಗಾಜಿನ ಮೇಲೆ ಕ್ಷಮಾಪಣಾ ಪತ್ರ ಅಂಟಿಸಿ ಹೋಗಿದ್ದಾನೆ..
ರಾಜಸ್ಥಾನದ ಜೈಪುರ ರಸ್ತೆಯಲ್ಲಿರುವ ಗ್ರೀನ್‌ ಗಾರ್ಡನ್‌ ಹೋಟೆಲ್‌ ಬಳಿ ಈ ಘಟನೆ ನಡೆದಿದೆ.. ರಸ್ತೆ ಬದಿಯಲ್ಲಿ ಕಾರೊಂದು ನಿಂತಿದ್ದು, ಅದರ ಮೇಲೆ ಕ್ಷಮಾಪಣಾ ಪತ್ರ ಇತ್ತು.. ಇದನ್ನು ನೋಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ.. ಈ ಸ್ಕಾರ್ಪಿಯೋ ಕಾರನ್ನು ದೆಹಲಿಯ ಪಾಲಂ ವಿಹಾರ್‌ ಪ್ರದೇಶದಿಂದ ಕಳವು ಮಾಡಲಾಗಿದ್ದು, ರಾಜಸ್ಥಾನಕ್ಕೆ ಇದನ್ನು ತರಲಾಗಿದೆ.. ಆದ್ರೆ ದಾರಿ ಮಧ್ಯೆ ಅದೇನಾಯ್ತೋ ಏನೋ ಕಾರನ್ನು ಸೈಡ್‌ಗೆ ನಿಲ್ಲಿಸಿದ್ದಾನೆ.. ನಂತರ ಕಾರಿನ ಗಾಜಿನ ಮೇಲೆ ಕ್ಷಮಾಪಣಾ ಪತ್ರ ಅಂಟಿಸಿದ್ದಾನೆ.. ಕಾರು ಕಳ್ಳತನ ಮಾಡಲಾಗಿದೆ.. ದಯವಿಟ್ಟು ಕ್ಷಮಿಸಿ ಎಂದು ಆತ ಅಲ್ಲಿ ಬರೆದಿದ್ದಾನೆ..
ಆ 9ರಂದು ಮನೆ ಮುಂಭಾಗದಲ್ಲಿ ದೆಹಲಿಯ ಪಾಲಂ ವಿಹಾರ್‌ ನ ವಿನಯ್‌ ಕುಮಾರ್‌ ಕಾರು ನಿಲ್ಲಿಸಿದ್ದರು.. ಈ ವೇಳೆ ಕಾರನ್ನು ಕಳವು ಮಾಡಲಾಗಿತ್ತು.. ಈ ಬಗ್ಗೆ ವಿನಯ್‌ ಕುಮಾರ್‌ ನಪಾಸರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು..

Share Post