CrimeNational

ಕುಟುಂಬ ಸದಸ್ಯರೆಲ್ಲಾ ಅನುಮಾನಾಸ್ಪದ ಸಾವು; ಕಾರಣ..?

ಧುಲೆ (ಮಹಾರಾಷ್ಟ್ರ); ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.. ಮನೆಯಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.. ಆತ್ಮಹತ್ಯೆಯೋ, ಕೊಲೆಯೋ ಗೊತ್ತಾಗುತ್ತಿಲ್ಲ.. ಮಹಾರಾಷ್ಟ್ರದ ಧುಲೆ ನಗರದ ಪ್ರಮೋದ್‌ ನಗರದಲ್ಲಿ ಈ ಘಟನೆ ನಡೆದಿದೆ.. ಪೊಲೀಸರು ಸಾವಿಗೆ ಕಾರಣ ಹುಡುಕುತ್ತಿದ್ದಾರೆ..
ಕೃಷಿ ರಸಗೊಬ್ಬರಗಳ ಮಾರಾಟಗಾರ ಪ್ರವೀಣ್‌ ಮಾನ್‌ಸಿಂಗ್‌, ಅವರ ಪತ್ನಿ, ಶಿಕ್ಷಕಿ ಗೀತಾ ಹಾಗೂ ಅವರ ಇಬ್ಬರು ಮಕ್ಕಳಾದ ಸೋಹಂ ಗಿರಾಸೆ, ಮಿತೇಶ್‌ ಗಿರಾಸೆ ಸಾವನ್ನಪ್ಪಿದವರು.. ದೇವಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಸಮರ್ಥ ಕಾಲೋನಿಯಲ್ಲಿ ಇವರು ವಾಸವಿದ್ದರು.. ಮನೆಯಲ್ಲಿ ಇಂದು ಬೆಳಗ್ಗೆ ನಾಲ್ವರ ಮೃತದೇಹಗಳು ಪತ್ತೆಯಾಗಿದೆ.. ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಅಕ್ಕಪಕ್ಕದವರು ಕಿಟಕಿಯಲ್ಲಿ ನೋಡಿದಾಗ ಮೃತದೇಹಗಳು ಕಾಣಿಸಿವೆ.. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ..
ಪ್ರವೀಣ್‌ ಗಿರಾಸೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿದ್ದರೆ, ಪತ್ನಿ ಹಾಗೂ ಇಬ್ಬರು ಮಕ್ಕಳು ವಿಷ ಸೇವಿಸಿದ್ದಾರೆ.. ಇದು ಸಾಮೂಹಿಕ ಆತ್ಮಹತ್ಯೆಯೋ ಅಥವಾ ಹತ್ಯೆಯೋ ಗೊತ್ತಾಗುತ್ತಿಲ್ಲ.. ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.. ನಾಲ್ಕು ದಿನಗಳಿಂದ ಮನೆಯ ಬಾಗಿಲು ತೆರೆದಿರಲಿಲ್ಲ.. ಮನೆಗೆಲಸ ಮಾಡಲು ಬರುವ ಮಹಿಳೆ ಕೂಡಾ ಎರಡು ದಿನ ಮನೆ ಬಳಿ ಬಂದು ಬೆಲ್‌ ಮಾಡಿದ್ದಾಳೆ.. ಆದ್ರೆ ಬಾಗಿಲು ತೆಗೆದಿಲ್ಲ.. ಊರಿಗೆ ಹೋಗಿರಬಹುದೆಂದು ಆಕೆ ಸುಮ್ಮನಾಗಿದ್ದಳು ಎಂದು ತಿಳಿದುಬಂದಿದೆ..

Share Post