LifestyleNational

ಮೂಢನಂಬಿಕೆ; ಅನ್ನ, ನೀರು ಬಿಟ್ಟಿದ್ದ ಕುಟುಂಬಕ್ಕೆ ಏನಾಯ್ತು..?

ಛತ್ತೀಸ್‌ಗಢ; ಮೂಢನಂಬಿಕೆಯಿಂದ ಕುಟುಂಬವೊಂದು ಏನನ್ನೂ ತಿನ್ನದೇ, ಕುಡಿಯದೇ ಉಪವಾಸವಿದ್ದು, ಸಂಕಷ್ಟಕ್ಕೆ ಸಿಲುಕಿದೆ. 6-7 ದಿನ ಉಪವಾಸ ಇದ್ದಿದ್ದರಿಂದ ಇಬ್ಬರು ಮೃತಪಟ್ಟಿದ್ದು, ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಇನ್ನಿಬ್ಬರು ಮಾನಸಿಕವಾಗಿ ಅಸ್ವಸ್ತರಾಗಿದ್ದಾರೆ.

  ಕುಟುಂಬದವರೆಲ್ಲಾ ಅನ್ನ, ನೀರು ಬಿಟ್ಟು ಜಪ, ತಪ ಮಾಡುತ್ತಿದ್ದರು.. ಇವರೆಲ್ಲಾ ಉಜ್ಜಯಿನಿಯ ಬಾಬಾ ಜೈ ಗುರುದೇವನಲ್ಲಿ ಕುರುಡು ನಂಬಿಕೆ ಹೊಂದಿದ್ದರು ಎಂದು ತಿಳಿದುಬಂದಿದೆ.. ಛತ್ತೀಸ್‌ಗಢದ ತಂಡುಲ್ದಿಹ್ ಗ್ರಾಮದಲ್ಲಿ ನಡೆದಿದೆ.

  ಈ ವಿಚಾರ ತಿಳಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಲ್ಲಿಗೆ ತಲುಪುವಷ್ಟರಲ್ಲಿ ಎಲ್ಲರ ಆರೋಗ್ಯ ಹದಗೆಟ್ಟಿತ್ತು. ಪೊಲೀಸರು ಎಲ್ಲರನ್ನು ಆಸ್ಪತ್ರೆಗೆ ಕರೆದೊಯ್ದರು. ಇಲ್ಲಿ ಇಬ್ಬರು ಯುವಕರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಅದೇ ಸಮಯದಲ್ಲಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಇಬ್ಬರನ್ನು ದಾಖಲಿಸಲಾಗಿದೆ. ಇನ್ನಿಬ್ಬರ ಮಾನಸಿಕ ಸಮತೋಲನ ಹದಗೆಟ್ಟಿದೆ ಎನ್ನಲಾಗಿದೆ.

Share Post