National

ಹೆಲಿಕಾಪ್ಟರ್‌ ದುರಂತದ ತನಿಖೆಗೆ ವಿಶೇಷ ತಂಡ ರಚನೆ

ದೆಹಲಿ: ಬುಧವಾರ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ದುರಂತಕ್ಕೀಡಾಗಿತ್ತು, ಅವಘಡದಲ್ಲಿ ರಾವತ್‌ ಸೇರಿದಂತೆ 13ಮಂದಿ ಜೀವ ತೆತ್ತಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಐಎಎಫ್‌ನಿಂದ ಉನ್ನತ ಮಟ್ಟದ ತನಿಖೆ ಈಗಾಗಲೇ ಶುರುವಾಗಿದ್ದು, ಏರ್‌ ಮಾರ್ಷಲ್‌ ಮನ್ವಿಂದರ್‌ ಸಿಂಗ್‌ ನೇತೃತ್ವದ ಕಮಿಟಿ ಘಟನಾ ಸ್ಥಳದಲ್ಲಿ ನಿನ್ನೆಯಿಂದ ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳದಲ್ಲಿ ತನಿಖಾ ಕಮಿಟಿಗೆ ಬ್ಲಾಕ್‌ ಬಾಕ್ಸ್‌ ಮತ್ತು ವಾಯ್ಸ್‌ ರೆಕಾರ್ಡರ್‌ ದೊರೆತಿದ್ದು ಸೇನಾ ತಂಡ ವಶಪಡಿಸಿಕೊಂಡಿದೆ.

Share Post