NationalPolitics

ವಿಶ್ವಾಸಮತ ಸಾಬೀತು ಮಾಡಿದ ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌

ರಾಂಚಿ; ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ವಿಶ್ವಾಸಮತ ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ, ಇಂದು ಜಾರ್ಖಂಡ್‌ ರಾಜ್ಯ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತಯಾಚನೆಯಲ್ಲಿ ಅವರು ಗೆದ್ದಿದ್ದಾರೆ.

ಸಿಎಂ ಸೊರೇನ್ ಮಂಡಿಸಿದ ವಿಶ್ವಾಸಮತ ನಿರ್ಣಯವನ್ನು ಜಾರ್ಖಂಡ್ ವಿಧಾನಸಭೆ ಅಂಗೀಕರಿಸಿತು. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಸಿಎಂ ಹೇಮಂತ್ ಸೊರೇನ್ ಪರವಾಗಿ 48 ಮತಗಳು ಚಲಾವಣೆಯಾದವು. ಈ ವೇಳೆ ಬಿಜೆಪಿ ಶಾಸಕರು ಗದ್ದಲ ನಡೆಸಿ ಸಭಾತ್ಯಾಗ ನಡೆಸಿದರು. ಇದೇ ವೇಳೆ ಮಾತನಾಡಿರುವ ಸೊರೇನ್‌, ದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವುದು ಅನಿವಾರ್ಯವೆನಿಸಿತ್ತು ಎಂದು ಹೇಳಿದ್ದಾರೆ.

Share Post