CrimeDistrictsHealth

ನೀರಿಗೆ ಬಿದ್ದಿದ್ದ ಸ್ನೇಹಿತನ್ನು ರಕ್ಷಿಸಲು ಹೋಗಿ ವೈದ್ಯ ಸಮುದ್ರಪಾಲು..!

ಮಂಗಳೂರು; ಜಾರಿ ಸಮುದ್ರಕ್ಕೆ ಬಿದ್ದಿದ್ದ ಸ್ನೇಹಿತನನ್ನು ರಕ್ಷಣೆ ಮಾಡಲು ಹೋದ ವೈದ್ಯರೊಬ್ಬರು ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಡಾ.ಆಶೀಕ್‌ ಗೌಡ ಅವರೇ ಸಮುದ್ರಪಾಲಾಗಿರುವವರು. ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್‌ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇಂಟರ್ನ್‌ಶಿಪ್‌ ಮಾಡುತ್ತಿದ್ದ ಐವರು ವೈದ್ಯರ ತಂಡ ತಡರಾತ್ರಿಯಲ್ಲಿ ಸಮುದ್ರದ ದಡದಲ್ಲಿ ವಿಹಾರಕ್ಕೆ ತೆರಳಿತ್ತು. ಇದರಲ್ಲಿ ಡಾ.ಆಶೀಕ್‌ ಗೌಡ ಕೂಡಾ ಇದ್ದರು. ಸೋಮೇಶ್ವರ ಬೀಚ್‌ ರುದ್ರಪಾದೆ ಮೇಲೇರಿ ವೈದ್ಯರು ಸಮುದ್ರದ ಅಲೆಗಳನ್ನು ವೀಕ್ಷಿಸುತ್ತಿದ್ದರು. ಈ ವೇಳೆ ಡಾ.ಪ್ರದೀಪ್‌ ಎಂಬುವವರು ಬಂಡೆಯ ಮೇಲಿಂದ ಜಾರಿಬಿದ್ದಿದ್ದರು. ಬಂಡೆಯನ್ನು ನೇತಾಡುತ್ತಿದ್ದ ಅವರು ಸಹಾಯಕ್ಕಾಗಿ ಕೂಗುತ್ತಿದ್ದರು. ಈ ವೇಳೆ ಡಾ.ಅಶೀಕ್‌ ಗೌಡ ಅವರು ಸಹಾಯಕ್ಕೆ ಬಂದಿದ್ದು, ಈ ವೇಳೆ ಆಶೀಕ್‌ ಗೌಡ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ. ಇತ್ತ ಬಂಡೆ ಹಿಡಿದ ನೇತಾಡುತ್ತಿದ್ದ ಡಾ. ಪ್ರದೀಪ್‌ ಅವರು ಕಲ್ಲುಗಳ ಆಸರೆ ಪಡೆದು ಹೇಗೋ ಬಚಾವ್‌ ಆಗಿ ಬಂದಿದ್ದಾರೆ.

ಘಟನೆ ಬಗ್ಗೆ ಡಾ.ಪ್ರದೀಪ್‌ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post