CrimeNational

ಗುಂಡಿಕ್ಕಿ ಶಿಕ್ಷಕನ ಕುಟುಂಬದ ನಾಲ್ವರ ಬರ್ಬರ ಹತ್ಯೆ!

ಉತ್ತರಪ್ರದೇಶ; ಶಿಕ್ಷಕರ ಮನೆಗೆ ನುಗ್ಗಿದ ದುಷ್ಕರ್ಮಿಗಳು ರಕ್ತದ ಕೋಡಿ ಹರಿಸಿದ್ದಾರೆ.. ಶಿಕ್ಷಕ ದಂಪತಿ ಹಾಗೂ ಅವರ ಇಬ್ಬರು ಮಕ್ಕಳನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.. ಉತ್ತರ ಪ್ರದೇಶದ ಅಮೇಥಿಯಲ್ಲಿ ಈ ದುರ್ಘಟನೆ ನಡೆದಿದ್ದು, ಕೊಲೆ ಮಾಡಿದ ನಂತರ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.. ಪೊಲೀಸರು ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..
ಮೃತರನ್ನು ಶಿಕ್ಷಕರಾದ ಸುನಿಲ್‌ ಕುಮಾರ್‌, ಅವರ ಪತ್ನಿ ಪೂನಂ ಹಾಗೂ 2 ಮತ್ತು 5 ವರ್ಷದ ಇಬ್ಬರು ಮಕ್ಕಳನ್ನು ಕೂಡಾ ಹತ್ಯೆ ಮಾಡಲಾಗಿದೆ.. ಇಡೀ ಕುಟುಂಬ ಗುಂಡಿನ ದಾಳಿಗೆ ಆಹುತಿಯಾಗಿದೆ.. ಈ ಕುಟುಂಬ ಭವಾನಿ ಕ್ರಾಸಿಂಗ್‌ ಬಳಿಯ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಮನೆಗೆ ನುಗ್ಗಿರುವ ಆಗಂತುಕರು ಎಲ್ಲರ ಮೇಲೆ ಗುಂಡು ಹಾರಿಸಿದ್ದಾರೆ.. ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಮನೆಯಲ್ಲಿ ಯಾವುದೇ ವಸ್ತುಗಳಾಗಲೀ, ಚಿನ್ನಾಭರಣವಾಗಲೀ ಕಳುವಾಗಿಲ್ಲ.. ಹೀಗಾಗಿ ಕೊಲೆ ಮಾಡಲೆಂದೇ ದುಷ್ಕರ್ಮಿಗಳು ಬಂದಿದ್ದರು ಎಂಬುದು ಅರ್ಥವಾಗುತ್ತದೆ..
ಶಿಕ್ಷಕ ಸುನಿಲ್‌ ಕುಮಾರ್‌ ಅವರ ಪತ್ನಿ ಪೂನಂ ಅವರು ಆಗಸ್ಟ್‌ 18ರಂದು ಚಂದನ್‌ ಶರ್ಮಾ ಎಂಬಾತನ ವಿರುದ್ಧ ಹಲ್ಲೆ, ಕೊಲೆ ಬೆದರಿಕೆ ಹಾಗೂ ಕಿರುಕುಳ ನೀಡುತ್ತಿದ್ದಾನೆಂದು ದೂರು ಕೊಟ್ಟಿದ್ದರು.. ಈ ಹಿಂದೆ ಎಸ್‌ಸಿ ಎಸ್‌ಟಿ ಕಾಯ್ದೆಯಡಿ ಕೂಡಾ ಕೇಸ್‌ ದಾಖಲಾಗಿತ್ತು.. ಹೀಗಾಗಿ, ಕೊಲೆಗೆ ವೈಯಕ್ತಿಕ ದ್ವೇಷ ಕಾರಣ ಎಂದು ಹೇಳಲಾಗುತ್ತಿದೆ.. ಆದ್ರೆ ಸ್ಪಷ್ಟವಾದ ಕಾರಣ ಗೊತ್ತಾಗಿಲ್ಲ.. ಕಾನೂನು ವಿವಾದ ಏನು..? ದುಷ್ಕರ್ಮಿಗಳು ಯಾರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.. ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..
ಸುನಿಲ್ ಕುಮಾರ್‌ ಅವರು ಸಿಂಗ್‌ಪುರ್‌ ಬ್ಲಾಕ್‌ನ ಪನ್ಹೋನಾ ಸರ್ಕಾರಿ ಕಾಂಪೋಸಿಟ್‌ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.. ಅದಕ್ಕೂ ಮೊದಲು ಅವರು ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು..

Share Post