National

ಕರ್ನಾಟಕಕ್ಕೆ ಸೇರಿಸಲು ಮಹಾರಾಷ್ಟ್ರದ 42 ಹಳ್ಳಿಗಳ ಜನ ಆಗ್ರಹ

ಚಿಕ್ಕೋಡಿ; ಮಹಾರಾಷ್ಟ್ರ – ಕರ್ನಾಟಕದ ಗಡಿ ವಿವಾದ ಸುಪ್ರೀಂ ಕೋರ್ಟ್‍ನಲ್ಲಿ ಅಂತಿಮ ಹಂತಕ್ಕೆ ಬಂದಿದೆ. ಈ ವೇಳೆಯಲ್ಲೇ ಗಡಿ ವಿವಾದ ತಾರಕಕ್ಕೇರುತ್ತಿದೆ. ಮರಾಠಿ ಪುಂಡರು ಒಂದು ಕಡೆ ಬಸ್‌ಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಆದ್ರೆ ಅದೇ ಮಹಾರಾಷ್ಟ್ರದ ಗಡಿ ಜನರು ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಅಂತ ಆಗ್ರಹಿಸುತ್ತಿದ್ದಾರೆ. ನಮಗೆ ನೀರು ಒದಗಿಸಿ, ಇಲ್ಲದಿದ್ದರೆ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು 42 ಹಳ್ಳಿಗಳ ಜನ ಆಗ್ರಹ ಮಾಡಿದ್ದಾರೆ.
ಜತ್ತ ತಾಲೂಕಿನ 42 ಹಳ್ಳಿಗಳ ಜನರ ಒಕ್ಕೊರಲಿನಿಂದ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಆಗ್ರಹ ಮಾಡಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಉಮದಿ ಗ್ರಾಮದಲ್ಲಿ ಎಲ್ಲರೂ ಸಭೆ ಸೇರಿದ್ದರು. ಜತ್ತ ನೀರಾವರಿ ಹೋರಾಟ ಸಮಿತಿಯ ಸದಸ್ಯರೆಲ್ಲಾ ಸೇರಿ ನಮಗೆ ನೀರು ಒದಗಿಸಿ, ಇಲ್ಲದಿದ್ದರೆ ನಮ್ಮ ಭಾಗವನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಆಗ್ರಹಿಸಿದರು.

Share Post