National

ವಿಜಯ ದಿವಸ್‌ ಆಚರಿಸಿ ತವರಿಗೆ ತೆರಳಿದ ಅನ್ನದಾತರು

ನವದೆಹಲಿ:  ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆದು ರೈತರ ಬೇಡಿಕೆಗಳ ಪ್ರಸ್ತಾವನೆ ಹಸ್ತಾರಿಸಿದ್ರಿಂದ, ಕಳೆದ ಒಂದು ವರ್ಷದಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಅನ್ನದಾತರು ಕೈ ಬಿಟ್ಟಿದ್ದಾರೆ. ತಮ್ಮ ವಿಜಯವನ್ನು ಔಪಚಾರಿಕವಾಗಿ ಗುರ್ತಿಸಿ ಗಡಿಗಳಲ್ಲಿ ʻವಿಜಯ್‌ ದಿವಸ್‌ʼ ಆಚರಿಸಿ ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ. ಗಾಜಿಪುರ, ಸಿಂಘು, ಟಿಕ್ರಿ ಗಡಿಗಳಲ್ಲಿ ನಿರ್ಮಿಸಿದ್ದ ತಡೆಗೋಡೆ ಕಳಚಿದ್ದಾರೆ ಹಾಗಾಗಿ ಗಡಿಗಳಲ್ಲಿ ಎಂದಿನಂತೆ ಕಾರ್ಚಟುವಟಿಕೆಗಳು ಗರಿಗೆದರಿವೆ. ಒಂದು ವರ್ಷದಿಂದ ಬೀಡು ಬಿಟ್ಟಿದ್ದ ಪ್ರದೇಶಗಳನ್ನು ಬಿಟ್ಟು ಹೋಗುತ್ತಿರುವುದಕ್ಕೆ ರೈತರು ಭಾವುಕರಾದ್ರು, ತಮ್ಮ ಎಲ್ಲಾ ಸರಕು ಸರಂಜಾಮುಗಳನ್ನು ತುಂಬಿಕೊಂಡು ಲಾರಿ, ಟ್ರಾಕ್ಟರ್‌, ಟ್ರಕ್‌, ಜೀಪು, ಬಸ್‌ಗಳನ್ನು ಸಿಂಗರಿಸಿಕೊಂಡು, ಜಯಘೋಷ ಹಾಡುತ್ತಾ ಗರ್ವದೊಂದಿಗೆ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ.

Share Post