National

50 ಶಾಸಕರಲ್ಲಿ ಒಬ್ಬರು ಸೋತರೂ ರಾಜಕೀಯ ನಿವೃತ್ತಿ; ಏಕನಾಥ್‌ ಶಿಂಧೆ

ಮುಂಬೈ; ನನ್ನನ್ನು ಶಿವಸೇನೆಯ ಶಾಸಕರು ಸೇರಿ ಒಟ್ಟು ಐವತ್ತು ಶಾಸಕರು ಬೆಂಬಲಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರಲ್ಲಿ ಯಾರೊಬ್ಬರು ಸೋತರೂ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹೇಳಿದ್ದಾರೆ. 

ಬೆಂಬಲಿತ ರೆಬೆಲ್ ಶಾಸಕರು ಶಿಂಧೆ ಅವರನ್ನು ಅಭಿನಂದಿಸಿದರು. ಈ ವೇಳೆ ಮಾತನಾಡಿದ ಅವರು, ಈ ಎಲ್ಲ ಶಾಸಕರ ಆಗು-ಹೋಗುಗಳ ಬಗ್ಗೆ ಗಮನ ಹರಿಸುವುದು ನನ್ನ ಕರ್ತವ್ಯ. ಅವರ ಕ್ಷೇತ್ರಗಳ ಸಮಸ್ಯೆಗಳನ್ನು ಪರಿಹರಿಸಲು ನಾನು  ಸಮಯ ನೀಡುತ್ತೇನೆ. ಎಲ್ಲರನ್ನೂ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಅವರು ಹೇಳಿದ್ದಾರೆ.

 

Share Post