NationalPolitics

ನಾಳೆ ಮುಂಬೈಗೆ ಬರುತ್ತೆ ಶಿಂಧೆ ಟೀಂ; ಗುವಾಹಟಿಯಿಂದ ಗೋವಾಗೆ ಶಿಫ್ಟ್‌

ಮುಂಬೈ; ನಾಳೆ ಮಹಾರಾಷ್ಟ್ರ ಸರ್ಕಾರದ ಬಹುಮತ ಸಾಬೀತು ಪ್ರಕ್ರಿಯೆ ಇರುವುದರಿಂದ ಬಂಡಾಯ ಶಾಸಕರು ಮುಂಬೈಗೆ ಬರಲು ಸಿದ್ಧತೆ ನಡೆಸಿದ್ದಾರೆ. ನಾಳೆ ಬಂಡಾಯ ಶಾಸಕರೆಲ್ಲಾ ಮುಂಬೈಗೆ ಬರಲಿದ್ದಾರೆ. ಸದ್ಯ ಗುವಾಹಟಿಯಲ್ಲಿದ್ದ ಶಾಸಕರು ಈಗ ಮಹಾರಾಷ್ಟ್ರಕ್ಕೆ ಹತ್ತಿರದ ಗೋವಾಕ್ಕೆ ಶಿಫ್ಟ್‌ ಆಗುತ್ತಿದ್ದಾರೆ. ಸ್ಪೈಸ್‌ ಜೆಟ್‌ ವಿಶೇಷ ವಿಮಾನದಲ್ಲಿ ಎಲ್ಲಾ ಐವತ್ತೂ ಬಂಡಾಯ ಶಾಸಕರೂ ಗೋವಾಗೆ ಶಿಫ್ಟ್‌ ಆಗುತ್ತಿದ್ದಾರೆ. ಅವರಿಗಾಗಿ ಗೋವಾದ ತಾಜ್‌ ಹೋಟೆಲ್‌ನಲ್ಲಿ ಎಪ್ಪತ್ತಕ್ಕೂ ಹೆಚ್ಚು ರೂಂಗಳನ್ನು ಬುಕ್‌ ಮಾಡಲಾಗಿದೆ. 

 

ಬಂಡಾಯ ಶಾಸಕರ ಮುಖಂಡ ಏಕನಾಥ ಶಿಂಧೆ  ಕೂಡಾ ನಾಳೆ ಮುಂಬೈಗೆ ಬರುತ್ತಿದ್ದೇವೆ ಎಂದು ಹೇಳಿದ್ದಾರೆ. ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ ಸರ್ಕಾರದ ವಿರುದ್ಧ ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದಾರೆ. ಜೂನ್‌ 30ರಂದು 11 ಗಂಟೆಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ಉದ್ಧವ್‌ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಸೂಚಿಸಿದ್ದಾರೆ.

 

Share Post