NationalPolitics

ಎಐಎಡಿಎಂಕೆ ನಾಯಕತ್ವಕ್ಕಾಗಿ ಕಿತ್ತಾಟ; ಎರಡು ಗುಂಪುಗಳ ಘರ್ಷಣೆ

ಚೆನ್ನೈ;‌ ಎಐಎಡಿಎಂಕೆ ನಾಯಕತ್ವಕ್ಕಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಇಂದು ಚೆನ್ನೈನ ಕೇಂದ್ರ ಕಚೇರಿಯಲ್ಲಿ ಎಐಎಡಿಎಂಕೆ ಪಕ್ಷದ ಮಹತ್ವದ ಜನರಲ್ ಕೌನ್ಸಿಲ್ ಸಭೆ ನಡೆಯುತ್ತಿದೆ. ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿ ಹುದ್ದೆಯ ಆಯ್ಕೆ, ಸಂಯೋಜಕ ಮತ್ತು ಜಂಟಿ ಸಂಯೋಜಕ ಹುದ್ದೆಗಳನ್ನು ಪ್ರಸ್ತಾಪಿಸುವ ಸಭೆ ಇದಾಗಿದೆ. ಇದಕ್ಕೂ ಮುನ್ನ ಎಐಎಡಿಎಂಕೆ ಕಚೇರಿಯ ಹೊರಗೆ ಪನ್ನೀರ್‌ ಸೆಲ್ವಂ ಬಣ ಹಾಗೂ ಪಳನಿಸ್ವಾಮಿ ಬಣ ಸಂಘರ್ಷ ನಡೆಸಿದೆ.

  ಒಂದೇ ಪಕ್ಷದ ನಾಯಕರಿಬ್ಬರ ಬೆಂಬಲಿಗರು ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಸುಟ್ಟು ಹಾಕಿ ಆಕ್ರೋಶ ಹೊರ ಹಾಕಿದರು. ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದ ಪ್ರಬಲ ಬಣಕ್ಕೆ ಎಐಎಡಿಎಂಕೆ ಪಕ್ಷದ ನಾಯಕತ್ವದ ಸಿಕ್ಕಿದೆ. ಆದ್ರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪನ್ನೀರ್ ಸೆಲ್ವಂ ಬಣ ಎಐಎಡಿಎಂಕೆ ಕಚೇರಿ ಹೊರಗೆ ಸಂಘರ್ಷಕ್ಕಿಳಿಯಿತು.‌ ಕಚೇರಿಯ ಬಾಗಿಲು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಸ್ಪರ ಕಲ್ಲು ತೂರಾಟಗಳು ಕೂಡಾ ನಡೆಯುತ್ತಿವೆ.

ಮದ್ರಾಸ್​ ಹೈಕೋರ್ಟ್​ ಈ ಸಭೆಗೆ ಸಮ್ಮತಿ ಸೂಚಿಸಿತ್ತು. ಈ ಮೂಲಕ ಪಕ್ಷದ ಇನ್ನೊಂದು ಬಣ ಓ.ಪನ್ನೀರ್ ಸೆಲ್ವಂಗೆ ಭಾರಿ ಹಿನ್ನಡೆಯಾಗಿದೆ. ಇದರಿಂದ ಆಕ್ರೋಶಗೊಂಡ ಒ.ಪನ್ನೀರ್‌ ಸೆಲ್ವಂ ಬೆಂಬಲಿಗರು ಇ.ಪಳನಿಸ್ವಾಮಿ ಕಾರ್ಯಕರ್ತರ ಜೊತೆ ಸಂಘರ್ಷಕ್ಕಿಳಿದಿದ್ದಾರೆ.

Share Post