NationalPolitics

ಕೊನೆಗೂ ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ; ರಾಜ್ಯಕ್ಕೆ ಬಂದ ಹಣ ಎಷ್ಟು..?

ನವದೆಹಲಿ; ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ನೀಡಿರಲಿಲ್ಲ.. ಹೀಗಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.. ಸುಪ್ರೀಂ ಕೋರ್ಟ್‌ ಸೂಚನೆಯ ನಂತರ ಕೊನೆಗೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಹಣ ನೀಡಿದೆ.. ಕರ್ನಾಟಕಕ್ಕೆ 3,454 ಕೋಟಿ ರೂಪಾಯಿ ಪರಿಹಾರ ಹಣ ರಿಲೀಸ್‌ ಮಾಡಲಾಗಿದೆ..

ಇದನ್ನೂ ಓದಿ; ಬೆಂಗಳೂರಿನ ಮತಗಟ್ಟೆಗೆ ಬಾರದಿರಲು ಕಾರಣಗಳೇನು..?

ಕೇಂದ್ರ ಹಣಕಾಸು ಇಲಾಖೆ ಈ ಹಣವನ್ನು ರಿಲೀಸ್‌ ಮಾಡಿದೆ.. ಸುಪ್ರೀಂಕೋರ್ಟ್‌ ಮುಂದೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಹೇಳಿತ್ತು.. ಅದರಂತೆ ರಾಜ್ಯಕ್ಕೆ ಕೊನೆಗೂ ಬರ ಪರಿಹಾರ ಸಿಕ್ಕಿದೆ. ಇನ್ನು ನೆರೆಯ ತಮಿಳುನಾಡಿಗೆ 275 ಕೋಟಿ ರೂಪಾಯಿ ಬರ ಪರಿಹಾರ ನೀಡಲಾಗಿದೆ..

ಇದನ್ನೂ ಓದಿ; ಮಗನನ್ನು ಕೊಲ್ಲಲು ತಂದೆಯಿಂದ 75 ಲಕ್ಷಕ್ಕೆ ಸುಪಾರಿ; ಗುಂಡಿನ ದಾಳಿಯಲ್ಲಿ ಗ್ರೇಟ್‌ ಎಸ್ಕೇಪ್‌!

ರಾಜ್ಯ ಸರ್ಕಾರ 18,174 ಕೋಟಿ ರೂಪಾಯಿ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು.. ಆದ್ರೆ ಕೇಂದ್ರ ಸರ್ಕಾರ ನೀಡಿರಲಿಲ್ಲ.. ಹೀಗಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು..

Share Post