National

ಪಂಜಾಬ್‌ ಚುನಾವಣೆ : ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿದ AAP

ಮೊಹಾಲಿ : ಮುಂದಿನ ತಿಂಗಳು ಪಂಜಾಬ್‌ನಲ್ಲಿ ನಡೆಯುವ ಚುನಾವಣೆಗೆ ಆಮ್‌ ಆದ್ಮಿ ಪಕ್ಷ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆಯನ್ನು ಜನರಿಗೆ ಕೊಟ್ಟಿತ್ತು. ಒಂದು ನಂಬರ್‌ ಬಿಡುಗಡೆ ಮಾಡಿ ನಿಮಗೆ ಯಾವ ಅಭ್ಯರ್ಥಿ ಸಿಎಂ ಆಗಬೇಕೆಂಬುದನ್ನು ನೀವೇ ಆಯ್ಕೆ ಮಾಡಿ ಎಂದು ಹೇಳಿತ್ತು. ಈಗ ಆಮ್‌ ಆದ್ಮಿ ಪಕ್ಷ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿದೆ.

ಪಕ್ಷದ ಪಂಜಾಬ್‌ ಘಟಕದ ಮುಖಂಡ ಭಗವಂತ ಮಾನ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅರವಿಂದ್‌ ಕೇಜ್ರಿವಾಲ್‌ ಮೊಹಾಲಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಮೊಬೈಲ್‌ ಆಪ್‌ ಮೂಲಕ ಜನರು ವೋಟ್‌ ಮಾಡಿ ತಮಗೆ ಯಾರು ಸಿಎಂ ಅಭ್ಯರ್ಥಿ ಆಗಬೇಕೆಂದು ತಿಳಿಸಿದ್ದರು. ಅದನ್ನು ಅರವಿಂದ್‌ ಕೇಜ್ರಿವಾಲ್‌ ಅವರು ಘೋಷಣೆ ಮಾಡಿದ್ದಾರೆ.

ಭಗವಾಂತ್‌ ಮಾನ್‌ ಅವರು ಸಿಎಂ ಅಭ್ಯರ್ಥಿ ಎಂದು ಘೋಷಣೆ ಆದ ತಕ್ಷಣ ಅವರ ಹುಟ್ಟೂರಿನಲ್ಲಿ ಸಂಭ್ರಮದ ಆಚರಣೆ ನಡೆಸಿದ್ದಾರೆ.

Share Post