LifestyleNational

ಮಾವುತನನ್ನು ತುಳಿದು ಸಾಯಿಸಿದ ದೇವಸ್ಥಾನದ ಆನೆ!

ಕೇರಳ; ಕೇರಳದಲ್ಲಿ ದೇಗುಲದ ಆನೆ ತುಳಿತಕ್ಕೆ ತುತ್ತಾಗಿ ಮಾವುತನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ.. ಕೇರಳದ ವೈಕೋಮ್‌ನಲ್ಲಿರುವ ಟಿವಿ ಪುರಂನ ಶ್ರೀರಾಮ ಮಂದಿರದಲ್ಲಿ ಈ ದುರ್ಘಟನೆ ನಡೆದಿದೆ. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಮಾವುತ ಸಾವನ್ನಪ್ಪಿದ್ದಾನೆ..

ಇದನ್ನೂ ಓದಿ; ಬೋರ್‌ವೆಲ್‌ನಿಂದ ಎದ್ದು ಬಂದ ಸಾತ್ವಿಕ್‌; ಆರಾಮಾಗಿದ್ದಾನೆ ಬಾಲಕ!

26 ವರ್ಷದ ಪುತ್ತುಪ್ಪಲ್ಲಿ ಮೂಲದ ಅರವಿಂದ್‌ ಎಂಬ ಮಾವುತನೇ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದಾನೆ.. ಪ್ರತಿ ದಿನವೂ ಈ ಮಾವುತನೇ ದೇಗುಲದ ಆನೆಯನ್ನು ನಿಭಾಯಿಸುತ್ತಿದ್ದ. ಅದಕ್ಕೆ ಆಹಾರವನ್ನೂ ಆತನೇ ಕೊಡುತ್ತಿದ್ದ.. ಆದ್ರೆ ಬುಧವಾರ ರಾತ್ರಿ ಅದೇನಾಯ್ತೋ ಏನೋ ಆನೆ ಇದ್ದಕ್ಕಿದ್ದಂತೆ ಕೆರಳಿದೆ.. ಆತನ್ನು ತುಳಿದು ಸಾಯಿಸಿದೆ.

ಕುಂಜುಲಕ್ಷ್ಮೀ ಎಂಬ ಆನೆಯನ್ನು ರಾಮನ ದೇವಸ್ಥಾನದಲ್ಲಿ ಸಾಕಲಾಗಿತ್ತು.. ಅದನ್ನು ಅರವಿಂದ್‌ ಎಂಬಾತ ನೋಡಿಕೊಳ್ಳುತ್ತಿದ್ದ.. ಕಳೆದ ರಾತ್ರಿ ಮಾವುತ ಅರವಿಂದನನ್ನು ಸೊಂಡಿಲಿನಿಂದ ಕೆಳಗೆ ಬೀಳಿಸಿದೆ.. ಅನಂತರ ಕಾಲಿನಿಂದ ತುಳಿದು ಸಾಯಿಸಿದೆ. ಎಲ್ಲರೂ ನೋಡನೋಡುತ್ತಿದ್ದಂತೆ ಈ ಘಟನೆ ನಡೆದಿದೆ..

ಇದನ್ನೂ ಓದಿ; ಶೂಟಿಂಗ್‌ ವೇಳೆ ನಟ ಅಜಿತ್‌ ಇದ್ದ ಕಾರು ಪಲ್ಟಿ; ಬಚಾವಾಗಿದ್ದೇ ಒಂದು ಪವಾಡ!

ಸ್ಥಳದಲ್ಲಿದ್ದ ಮತ್ತೊಬ್ಬ ಮಾವುತ ಅರವಿಂದ್‌ ರಕ್ಷಣೆಗೆ ಬರುತ್ತಾನೆ.. ಅರವಿಂದನನ್ನು ಎಳೆದುಕೊಂಡು ಸ್ಥಳದಲ್ಲಿದ್ದ ಜನರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ.. ಆದ್ರೆ ಅಷ್ಟರಲ್ಲಾಗಲೇ ಅರವಿಂದ್‌ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ..

Share Post