National

ಒಂದೇ ಕುಟುಂಬದ ನಾಲ್ವರ ಕೊಲೆ; ಕೊಲೆಗಾರನಿಗಾಗಿ ಹುಡುಕಾಟ..!

ಅಹಮದಾಬಾದ್: ವ್ಯಕ್ತಿಯೊಬ್ಬ ಅತ್ತೆ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಪರಾರಿಯಾಗಿರುವ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ಇಲ್ಲಿ ಬಿರಾಟ್‌ ನಗರದ ದಿವ್ಯೊಪ್ರಭಾ ಸೊಸೈಟಿ ಮನೆಯಲ್ಲಿ ಸಾಮೂಹಿಕ ಕೊಲೆ ನಡೆದಿದೆ. ಕೆಲ ದಿನಗಳ ಹಿಂದೆಯೇ ಈ ಕೊಲೆ ನಡೆದಿದ್ದು, ಮೃತದೇಹಗಳು ಕೊಳೆತು ದುರ್ವಾಸನೆ ಬಂದಿದ್ದರಿಂದ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

    ಮೃತರನ್ನು ಸೋನಾಲ್ ಮರಾಠಿ,  ಪ್ರಗತಿ ಮರಾಠಿ, ಗಣೇಶ ಮರಾಠಿ, ಸುಭದ್ರಾ ಮರಾಠಿ ಎಂದು ಗುರುತಿಸಲಾಗಿದೆ. ಆರೋಪಿ ವಿನೋದ್‌ ಮರಾಠಿ ಕೊಲೆ ಮಾಡಿ ಪರಾರಿಯಾಗಿದ್ದನೆಂದು ಹೇಳಲಾಗಿದೆ. ಚೂಪಾದ ಆಯುಧದಿಂದ ನಾಲ್ವರನ್ನೂ ಕೊಲೆ ಮಾಡಲಾಗಿದೆ. ಈ ಹಿಂದೆ ಕೂಡಾ ತ್ತೆ ಸೋನಾಲ್‌ ಮರಾಠಿ ಜೊತೆ ಜಗಳವಾಡಿದ್ದ ವಿನೋದ್‌ ಮರಾಠಿ ಆಕೆಗೆ ಚಾಕುವಿನಿಂದ ಇರಿದಿದ್ದ ಎಂದು ಗೊತ್ತಾಗಿದೆ.

ಅಹಮದಾಬಾದ್‌ನ ಬಿರಾಟ್‌ನಗರದ ದಿವ್ಯಪ್ರಭಾ ಸೊಸೈಟಿಯಲ್ಲಿ ಮನೆಯೊಂದರಿಂದ ದುರ್ವಾಸನೆ ಬರುತ್ತಿತ್ತು. ಹೀಗಾಗಿ ನೆರೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ನೋಡಿದಾಗ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಎಲ್ಲವೂ ಕೊಳೆತು ನಾರುತ್ತಿದ್ದವು ಎಂದು ತಿಳಿದುಬಂದಿದೆ.

Share Post