LifestyleNational

ಅನಂತಪದ್ಮನಾಭ ದೇವಸ್ಥಾನ ಮುಖ್ಯ ಅರ್ಚಕರಾಗಿ ಕನ್ನಡಿಗ ನೇಮಕ!

ಮಂಗಳೂರು; ದೇಶದ ಅತ್ಯಂತ ಶ್ರೀಮಂತ ದೇಗುವ ಕೇರಳ ರಾಜ್ಯ ತಿರುವನಂಪುರದ ಅನಂತಪದ್ಮನಾಭ ದೇಗುಲದ ಮುಖ್ಯ ಅರ್ಚಕರಾಗಿ ಕನ್ನಡಿಗರು ಆಯ್ಕೆಯಾಗಿದ್ದಾರೆ.. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸತ್ಯನಾರಾಯಣ ಎಂಬುವವರನ್ನು ಪದ್ಮನಾಭ ದೇಗುಲದ ಮುಖ್ಯ ಅರ್ಚಕರಾಗಿ ನೇಮಕ ಮಾಡಲಾಗಿದೆ.. ಜೂನ್‌ 16ರಂದು ದೇವಸ್ಥಾನದ ಆಡಳಿತ ಮಂಡಳಿ ಈ ಆದೇಶ ಹೊರಡಿಸಿದೆ..

ಇವರು ಕೊಕ್ಕಡ ಗ್ರಾಮದ ಬಡೆಕ್ಕರ ನಿವಾಸಿಯಾಗಿದ್ದಾರೆ.. ದಿ.ಸುಬ್ರಾಯ ತೋಡ್ತಿಲ್ಲಾಯ ಮತ್ತು ದಿ.ಯಶೋಧ ದಂಪತಿಗಳ ಮಗನಾಗಿರುವ ಸತ್ಯನಾರಾಯಣ ಅವರು, ಪಾಲಾಲೆ ದಿ. ಸತೀಶ ಯಡಪಡಿತ್ತಾಯರಲ್ಲಿ ವೇದ ಅಭ್ಯಾಸವನ್ನು ಮಾಡಿದ್ದರು.. 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಇವರು, ಪೂಜಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.. ಇವರ ತಂದೆ ದಿ.ಸುಬ್ರಾಯ ತೋಡ್ತಿಲ್ಲಾಯ ಅವರು ಈ ಹಿಂದೆ ಅನಂತಪದ್ಮನಾಭ ದೇಗುಲದಲ್ಲಿ ಎರಡು ವರ್ಷಗಳ ಕಾಲ ಅರ್ಚಕರಾಗಿ ಸೇವೆ ಮಾಡಿದ್ದರು ಎಂದು ತಿಳಿದುಬಂದಿದೆ..

 

Share Post