International

UKRAINE-RUSSIA WAR; ಖಾರ್ಕೀವ್‌ ಬಿಟ್ಟು ಹೊರಬಂದ 700 ಭಾರತೀಯರು; ಜೀವ ಲೆಕ್ಕಿಸದೆ ಗಡಿಯತ್ತ ಪಯಣ

ಖಾರ್ಕೀವ್‌; ರಾಯಚೂರು ಮೂಲದ ಮೂವರು ವಿದ್ಯಾರ್ಥಿಗಳು ಸೇರಿ ಭಾರತೀಯರ ದೊಡ್ಡ ಗುಂಪೊಂದು ಖಾರ್ಕೀವ್‌ ನಗರ ಬಿಟ್ಟು ಹೊರಬಂದಿದೆ. ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಜೀವವನ್ನೂ ಲೆಕ್ಕಿಸದೇ ಭಾರತಕ್ಕೆ ವಾಪಸ್ಸಾಗಲು ಖಾರ್ಕೀವ್‌ ನಗರದಿಂದ ಹೊರಬಂದಿದ್ದಾರೆ. ಸುಮಾರು ಏಳು ಕಿಲೋ ಮೀಟರ್‌ ದೂರ ನಡೆದು ರೈಲಿನಲ್ಲಿ ಗಡಿಯತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ಗುಂಪಿನಲ್ಲಿ ಬೇರೆ ದೇಶಗಳ ಜನರೂ ಇದ್ದಾರೆ. ಆದ್ರೆ 700ಕ್ಕೂ ಹೆಚ್ಚು ಮಂದಿ ಭಾರತೀಯರಿದ್ದರೆ, ಉಳಿದ 300 ಜನ ಬೇರೆ ದೇಶಗಳಿಗೆ ಸೇರಿದವರು ಎಂದು ತಿಳಿದುಬಂದಿದೆ. ಖಾರ್ಕೀವ್‌ನಲ್ಲಿ ರಷ್ಯಾ ದಾಳಿ ಜಾಸ್ತಿಯಾಗುತ್ತಿದೆ. ಸಿಕ್ಕ ಸಿಕ್ಕ ಕಟ್ಟಡಗಳ ಮೇಲೆ ದಾಳಿ ನಡೆಸುತ್ತಿದೆ. ಹೀಗಾಗಿ ಬಂಕರ್‌ಗಳಲ್ಲಿ ಅಡಗಿದ್ದ ಭಾರತೀಯರಿಗೆ ಭೀತಿ ಶುರುವಾಗಿದೆ. ಹೀಗಾಗಿ, ಎಲ್ಲರೂ ಸೇರಿ ಭಾರತದ ಬಾವುಟ ಹಿಡಿದು, ಗಡಿಯತ್ತ ಪ್ರಯಾಣ ಶುರು ಮಾಡಿದ್ದಾರೆ.

Share Post