HealthNational

ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ:ಸಚಿವರು, ಶಾಸಕರಿಗೆ ಸೋಂಕು

ಮಹಾರಾಷ್ಟ್ರ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಮತ್ತು ಓಮಿಕ್ರಾನ್‌ ಸೋಂಕು ಹೆಚ್ಚಾಗುತ್ತವೆ. ನಿನ್ನೆ ಒಂದೇ ದಿನ ೧೦ಕ್ಕೂ ಹೆಚ್ಚು ಸಚಿವರು ಮತ್ತು ೨೦ಶಾಸಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ವಿಚಾರವನ್ನು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ತಿಳಿಸಿದ್ದಾರೆ. ಸಚಿವ-ಶಾಸಕರಿಗೆ ಕೊರೊನಾ ವಕ್ಕರಿಸಿರುವುದರಿಂದ ವಿಧಾನಸಭೆ ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ ಎಂದಿದ್ದಾರೆ. ಒಂದೇ ದಿನದಲ್ಲಿ ಮಹಾರಾಷ್ಟ್ರದಲ್ಲಿ ೮,೦೬೭ ಪ್ರಕರಣಗಳು ದಾಖಲಾಗಿದೆ. ಶೇಕಡಾ ೫೦ರಷ್ಟು ಪ್ರಕರಣಗಳು ಹೆಚ್ಚಾಗಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ರೂಪಾಂತರಿ ವೈರಸ್‌ನ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನಿ ಮೋದಿಯವರು ತಿಳಿಸಿದ್ದಾರೆ. ಈಗಾಗಲೇ ನೈಟ್‌ ಕರ್ಪ್ಯೂ ಕೂಡ ವಿಧಿಸಲಾಗಿದೆ. ಸೋಂಕು ಹರಡುವಿಕೆ ಹೀಗೆ ಹೆಚ್ಚಾದ್ರೆ ಇನ್ನೂ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಅಜಿತ್‌ ಪವಾರ್‌ ತಿಳಿಸಿದ್ದಾರೆ. ಪ್ರತಿಯೊಬ್ಬರೂ ಚಾಚೂತಪ್ಪದೆ ನಿಯಮಾವಳಿಗಳನ್ನು ಪಾಲಿಸಬೇಕೆಂದು ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.

Share Post