HealthLifestyleNational

ದೋಸೆ ಗಂಟಲಲ್ಲಿ ಸಿಕ್ಕಿಕೊಂಡು ವ್ಯಕ್ತಿ ದಾರುಣ ಸಾವು!

ಹೈದರಾಬಾದ್‌; ದೋಸೆ ಗಂಟಲಲ್ಲಿ ಸಿಕ್ಕಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತೆಲಂಗಾಣದ ನಾಗರ್‌ ಕರ್ನೂಲ್‌ ಜಿಲ್ಲೆಯಲ್ಲಿ ನಡೆದಿದೆ.. ಇಲ್ಲಿನ ಕಲ್ಪಕುರ್ತಿ ಎಂಬ ಗ್ರಾಮದಲ್ಲಿ 41 ವರ್ಷ ವೆಂಕಟಯ್ಯ ಅವರು ದೋಸೆ ಸೇವಿಸುವಾಗ ಅದು ಗಂಟಲಲ್ಲಿ ಸಿಕ್ಕಿಕೊಂಡು ಸಾವನ್ನಪ್ಪಿದ್ದಾರೆ..
ವೆಂಕಟಯ್ಯಗೆ ಮದ್ಯ ಸೇವನೆ ಮಾಡುವ ಅಭ್ಯಾಸವಿದೆ.. ಅದೇ ರೀತಿ ನಿನ್ನೆ ಕೂಡಾ ಗುಂಡು ಹಾಕಿದ್ದ ವೆಂಕಟಯ್ಯ ನಂತರ ಊಟಕ್ಕೆ ಕುಳಿತಿದ್ದಾರೆ.. ಮನೆಯಲ್ಲಿ ದೋಸೆ ಮಾಡಿದ್ದು, ದೋಸೆ ಬಡಿಸಿದ್ದಾರೆ.. ದೋಸೆ ತಿನ್ನುವಾಗ ಅದು ಗಂಟಲಲ್ಲಿ ಸಿಲುಕಿದೆ.. ಇದರಿಂದಾಗಿ ಉಸಿರುಗಟ್ಟಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾರೆ..
ಕೂಡಲೇ ವೆಂಕಟಯ್ಯ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.. ಆದ್ರೆ ಅಷ್ಟರಲ್ಲಾಗಲೇ ವೆಂಕಟಯ್ಯ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.. ಇತ್ತೀಚೆಗಷ್ಟೇ ಕೇರಳದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿತ್ತು.. ಇಡ್ಲಿ ತಿನ್ನುವ ಸ್ಪರ್ಧೆ ವೇಳೆ ಇಡ್ಲಿ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ವ್ಯಕ್ತಿ ಸಾವನ್ನಪ್ಪಿದ್ದ.. ಇದೀಗ ದೋಸೆ ತಿನ್ನಲು ಹೋಗಿ ದೋಸೆ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ವ್ಯಕ್ತಿ ಸಾವನ್ನಪ್ಪಿದ್ದಾನೆ..

Share Post