DistrictsHealth

ಅಂಜಲಿ ಅಂಬಿಗೇರ ಸಹೋದರಿ ಆತ್ಮಹತ್ಯೆ‌ ಯತ್ನ

ಹುಬ್ಬಳ್ಳಿ; ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿ ಅಂಬಿಗೇರ ಕೊಲೆಯಾಗಿತ್ತು.. ಆಕೆಯ ಪ್ರಿಯಕರನೇ ಬರ್ಬರವಾಗಿ ಹತ್ಯೆ ಮಾಡಿದ್ದ.. ಇದರಿಂದ ಸಾಕಷ್ಟು‌ ನೊಂದಿದ್ದ ಅಂಜಲಿ ಸಹೋದರಿ ಯಶೋಧ ಆತ್ಮಹತ್ಯೆಗೆ ಯತ್ನಿಸಿದ್ದಾಳೆ..

   ಯಶೋಧ ಪಿನಾಯಿಲ್ ಸೇವನೆ ಮಾಡಿದ್ದು, ಅಸ್ವಸ್ಥಳಾಗಿದ್ದಾಳೆ.. ಕೂಡಲೇ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು‌ ಚಿಕಿತ್ಸೆ ನೀಡಲಾಗುತ್ತಿದೆ.. ಸದ್ಯದ ಮಾಹಿತಿ ಪ್ರಕಾರ ಯಶೋಧಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ..

  ನಿನ್ನೆ ಅಂದರೆ ಶನಿವಾರ ಅಂಜಲಿ ಹತ್ಯೆ ಖಂಡಿಸಿ ಹೋರಾಟ ನಡೆದಿತ್ತು.. ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಸ್ವಾಮೀಜಿ, ದಿಂಗಾಲೇಶ್ವರ ಶ್ರೀ, ಮನಸೂರಿನ ಬಸವರಾಜ ದೇವರು ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಹೋರಾಟದಲ್ಲಿ ಪಾಲ್ಗೊಂಡಿದ್ದರು.. ಈ ಹೋರಾಟದಲ್ಲಿ ಯಶೋಧಾ ಕೂಡಾ ಪಾಲ್ಗೊಂಡಿದ್ದಳು.. ಪ್ರತಿಭಟನೆ ವೇಳೆ ಕೂಡಾ ಯಶೋಧಾ ಪ್ರಜ್ಞೆ ತಪ್ಪಿದ್ದಳು.. ಈ ವೇಳೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿತ್ತು..

   ಮನೆಗೆ ಹೋಗಿದ್ದ ಯಶೋಧ ಅದೇನಾಯ್ತೋ ಏನೋ ರಾತ್ರಿ ಪಿನಾಯಿಲ್‌ ಸೇವನೆ ಮಾಡಿದ್ದಾಳೆ.. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ..

 

Share Post