CrimeNational

ಗೆಳತಿಯನ್ನು ಕೊಲೆ ಮಾಡಿ ಬ್ಯಾಗ್ ಗೆ ತುಂಬಿಸಿದ; ಆ ಹೋಟೆಲ್ ನಲ್ಲಿ ನಡೆದಿದ್ದೇನು..?

ಮನಾಲಿ; ಸೋಷಿಯಲ್‌‌‌ ಮೀಡಿಯಾದಲ್ಲಿ ಪರಿಚಯವಾಗಿದ್ದ ಗೆಳೆಯನನ್ನು‌ ನಂಬಿ ಬಂದಿದ್ದ ಯುವತಿ ಬರ್ಬರವಾಗಿ ಕೊಲೆಯಾಗಿದ್ದಾಳೆ.. ಮನಾಲಿಯ ಹೋಟೆಲ್ ಗೆ ಕರೆದೊಯ್ದಿದ್ದ ಸೋಷಿಯಲ್ ಮೀಡಿಯಾ ಗೆಳೆಯ, ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ನಂತರ ಬರ್ಬರವಾಗಿ ಕೊಲೆ ಮಾಡಿದ್ದಾನೆ..

   ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಗೆಳೆಯನನ್ನು‌ನಂಬಿ ಮಧ್ಯಪ್ರದೇಶದ ಭೋಪಾಲ್ ನ 26 ವರ್ಷದ ಶೀತಲ್ ಕೌಶಲ್ ಎಂಬಾಕೆ ಮನೆಯಿಂದ ಓಡಿಬಂದಿದ್ದಳು.. ಹರ್ಯಾಣ ಮೂಲದ ಪರ್ವಾಲಾ ಜಿಲ್ಲೆಯ 23 ವರ್ಷದ ವಿನೋದ್ ಠಾಕೂರ್ ಆಕೆಯನ್ನು ಹೋಟೆಲ್ ಗೆ ಕರೆದೊಯ್ದು ಕೊಲೆ ಮಾಡಿದ್ದಾನೆ.. ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ‌ ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ..

ಯುವತಿಯನ್ನು ಕೊಲೆ ಮಾಡಿದ ಆರೋಪಿ, ಆಕೆಯ ದೇಹವನ್ನು ಬ್ಯಾಗೊಂದಕ್ಕೆ ತುಂಬಿಸಿ ಹೊಟೇಲ್‌ನಲ್ಲೇ ಬಿಟ್ಟು ಹೊರಟು ಹೋಗಿದ್ದ. ಆದರೆ ಹೋಗುವ ವೇಳೆ ಆರೋಪಿಯ ವಿಚಿತ್ರ ವರ್ತನೆಯಿಂದ ಅನುಮಾನಗೊಂಡ ಹೊಟೇಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ತಿಳಿಸಿದ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ವಿನೋದ್ ಕುಮಾರ್ ಶೀತಲ್‌ನನ್ನು ಭೇಟಿಯಾಗುವುದಕ್ಕಾಗಿ ಈ ಹಿಂದೆ ಭೋಪಾಲ್‌ಗೂ ಬಂದಿದ್ದ, ಈ ಮಧ್ಯೆ ಮೇ 5 ರಂದು ಮಗಳು ಮನೆಯಿಂದ ನಾಪತ್ತೆಯಾಗಿದ್ದಳು. ಮನೆಯಿಂದ ಹೋಗುವ ಮೊದಲು ಆಕೆಯ ಬಳಿ 10 ಸಾವಿರ ರೂಪಾಯಿ ಇತ್ತು. ಆದರೆ ತಾನು ಎಲ್ಲಿಗೆ ಹೋಗುತ್ತಿರುವೆ ಎಂದು ಆಕೆ ಯಾರ ಬಳಿಯೂ ಹೇಳಿರಲಿಲ್ಲ, ಆದರೆ ಇದಾದ ನಂತರ ಫೋನ್‌ ಮೂಲಕ ಇಲ್ಲಿ ನಡೆದ ಘಟನೆ ತಿಳಿಯಿತು. ಇದೆಲ್ಲವೂ ನಮಗೆ ಆಘಾತಕಾರಿಯಾಗಿದೆ. ಆಕೆ ಈ ಹಿಂದೊಮ್ಮೆ ತನ್ನ ಸೋದರನ ಬಳಿ ವಿನೋದ್ ತನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಹೇಳಿದ್ದಳು ಎಂದು ಶೀತಲ್ ತಾಯಿ ಹೇಳಿದ್ದಾರೆ.

ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾ ಗೆಳೆಯನನ್ನು ನಂಬಿ ಪೋಷಕರಿಗೆ ಹೇಳದೇ ಹಣದೊಂದಿಗೆ ಮನೆ ಬಿಟ್ಟ ಯುವತಿ ಹೆಣವಾಗಿದ್ದಾಳೆ.

Share Post