HealthNational

ವ್ಯಕ್ತಿಯೊಬ್ಬರ ಪ್ರಾಣ ಕಾಪಾಡಿದ ಆಂಧ್ರ ಸಿಎಂ ಪತ್ನಿ

ತಿರುಪತಿ;  ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ಪತ್ನಿ ಹಾಗೂ ಮಾಜಿ ಸಿಎಂ ಎನ್‌.ಟಿ.ರಾಮಾರಾವ್‌ ಪುತ್ರಿ ನಾರಾ ಭುವನೇಶ್ವರಿ ಅಮರು ವ್ಯಕ್ತಿಯೊಬ್ಬರ ಪ್ರಾಣ ಕಾಪಾಡಿದ್ದಾರೆ.. ಈ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..

ಭುವನೇಶ್ವರಿ ಅವರು ವಿಮಾನದಲ್ಲಿ ಹೈದರಾಬಾದ್‌ನಿಂದ ತಿರುಪತಿಗೆ ಹೊರಟಿದ್ದರು.. ಈ ವೇಳೆ ಮಾರ್ಗಮಧ್ಯೆ ಸಹ ಪ್ರಯಾಣಿಕರೊಬ್ಬರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು.. ಶಶಿಧರ್‌ ಎಂಬ ಪ್ರಯಾಣಿಕರು ಸರಿಯಾಗಿ ಉಸಿರು ತೆಗೆದುಕೊಳ್ಳಲಾಗದೇ ಒದ್ದಾಡುತ್ತಿದ್ದರು..

ಈ ವಿಷಯ ಗೊತ್ತಾಗುತ್ತಿದ್ದಂತೆ ಭುವನೇಶ್ವರಿ ಅವರು ಸಿಎಂ ಕಚೇರಿ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದರು.. ತಿರುಪತಿ ನಿಲ್ದಾಣದಲ್ಲಿ ಲ್ಯಾಂಡ್‌ ಆಗುವ ಹೊತ್ತಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.. ಈ ಹಿನ್ನೆಲೆಯಲ್ಲಿ ವಿಮಾನ ಲ್ಯಾಂಡ್‌ ಆಗುತ್ತಿದ್ದಂತೆ ಆಂಬುಲೆನ್ಸ್‌ ರೆಡಿ  ಇತ್ತು.. ತಜ್ಞ ವೈದ್ಯರು ಕೂಡಾ ಅಲ್ಲಿಗೆ ಆಗಮಿಸಿದ್ದರು.. ಹೀಗಾಗಿ ಶಶಿಧರ್‌ ಅವರಿಗೆ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆತಿದ್ದರಿಂದ ಅವರು ಬದುಕುಳಿದಿದ್ದಾರೆ..

Share Post