CrimeHealthNational

ಕಾಲು ಜಾರಿ 300 ಅಡಿ ಆಳಕ್ಕೆ ಬಿದ್ದು ಅಮರನಾಥ ಯಾತ್ರಾರ್ಥಿ ಸಾವು

ಶ್ರೀನಗರ; ಅಮರನಾಥ್‌ ಯಾತ್ರೆ ವೇಳೆ ಮತ್ತೊಂದು ದುರ್ಘಟನೆ ನಡೆದಿದೆ. 59 ವರ್ಷದ ಯಾತ್ರಾರ್ಥಿಯೊಬ್ಬರು 300 ಅಡಿ ಆಳಕ್ಕೆ ಜಾರಿಬಿದ್ದು ಸಾವನ್ನಪ್ಪಿದ್ದಾರೆ. ಅಮರನಾಥನ ದರ್ಶನ ಪಡೆದು ಗುಹೆಯಿಂದ ವಾಪಸ್‌ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಕಾಳಿಮಾತಾ ಬಳಿ ಯಾತ್ರಾರ್ಥಿ ಜಾರಿಬಿದ್ದಿದ್ದಾರೆ. ಮೃತರನ್ನು ಬಿಹಾರದ ರೋಹ್ತಾಸ್‌ ನ ವಿಜಯ್‌ ಕುಮಾರ್‌ ಶಾ ಎಂದು ಗುರುತಿಸಲಾಗಿದೆ. ಅವರು ಮಮತಾ ಕುಮಾರಿ ಎಂಬುವವರೊಂದಿಗೆ ಯಾತ್ರೆಗೆ ಬಂದಿದ್ದರು. ಅಮರನಾಥನ ದರ್ಶನ ಮುಗಿಸಿ ವಾಪಸ್‌  ಬರುತ್ತಿದ್ದಾಗ ಅವರು ಕಾಳಿಮಾತಾ ಬಳಿ ಕಾಲುಜಾರಿ 300 ಅಡಿ ಆಳಕ್ಕೆ ಬಿದ್ದಿದ್ದಾರೆ. ಕೂಡಲೇ ಮೌಂಟೇನ್ ಪಾರುಗಾಣಿಕಾ ತಂಡ ಮತ್ತು ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ನಡೆಸಿ, ಅವರನ್ನು ರಕ್ಷಿಸಲಾಗಿತ್ತು. ಆದ್ರೆ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.

 

Share Post