Economy

ಬಜೆಟ್ ಕೇವಲ ಶ್ರೀಮಂತರಿಗೆ ಮಾತ್ರ-ಬಡವರಿಗಾಗಿ ಏನೂ ಇಲ್ಲ; ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಕೇಂದ್ರ ಬಜೆಟ್‌ ಕೇವಲ ಶ್ರೀಮಂತರಿಗೆ ಮಾತ್ರ. ಈ ಬಜೆಟ್‌ನಲ್ಲಿ ಬಡವರಿಗೆ ಏನೇನೂ ಇಲ್ಲ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರುಇದು ಅರ್ಜುನ ಮತ್ತು ದ್ರೋಣಾಚಾರ್ಯರ ಬಜೆಟ್, ಏಕಲವ್ಯನ ಬಜೆಟ್ ಅಲ್ಲ ಎಂದಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರು ಯಾವುದೇ ಕಾನೂನು ಇಲ್ಲದ ಕ್ರಿಪ್ಟೋಕರೆನ್ಸಿಯನ್ನು ಉಲ್ಲೇಖಿಸಿದರು. ಆದರೆ ಅದನ್ನು ಮೊದಲು ಚರ್ಚಿಸಿಲ್ಲ.  ಅವರ ಸ್ನೇಹಿತರಿಗೆ ಪ್ರಯೋಜನವಾಗುವ ಬಜೆಟ್ ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Share Post