DistrictsPolitics

ಡಿಸೆಂಬರ್‌ನಲ್ಲಿ ಯುವನಿಧಿ ಯೋಜನೆ ಜಾರಿ; ಸಚಿವ ಕೆ.ಹೆಚ್‌.ಮುನಿಯಪ್ಪ

ದಾವಣಗೆರೆ; ಚುನಾವಣೆ ಸಮಯದಲ್ಲಿ ಜನರಿಗೆ ಐದು ಗ್ಯಾರೆಂಟಿ ಭರವಸೆಗಳನ್ನು ನೀಡಿತ್ತು. ಅದರಲ್ಲಿ ನಾಲ್ಕು ಭರವಸೆಗಳನ್ನು ಈಗ ಈಡೇರಿಸಲಾಗಿದೆ. ಉಳಿದಿರೋದು ಒಂದು ಭರವಸೆ ಮಾತ್ರ. ಅದು ಯುವನಿಧಿ. ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಹಾಗೂ ನಿರುದ್ಯೋಗಿ ಡಿಪ್ಲೋಮಾದವರಿಗೆ ಪ್ರತಿ ತಿಂಗಳು ಒಂದೂವರೆ ಸಾವಿರ ರೂಪಾಯಿ ನೀಡುವ ಕಾರ್ಯಕ್ರಮವಿದೆ. 

ಎರಡು ವರ್ಷಗಳ ಕಾಲ ಈ ಹಣ ನೀಡಲಾಗುತ್ತದೆ. ಅಂದಹಾಗೆ ಎಜುಕೇಷನ್‌ ಮುಗಿಸಿ ಆರು ತಿಂಗಳಾದರೂ ಉದ್ಯೋಗ ಸಿಗದವರಿಗೆ ಈ ಯೋಜನೆ ಅನ್ವಯವಾಗುತ್ತದೆ. ಎರಡು ವರ್ಷದ ಮಟ್ಟಿಗೆ ಮಾತ್ರ ಈ ಪ್ರೋತ್ಸಾಹ ಧನ ಸಿಗುತ್ತದೆ. ಮಧ್ಯದಲ್ಲಿ ಕೆಲಸ ಸಿಕ್ಕರೂ ಈ ಹಣ ಸಿಗುವುದಿಲ್ಲ. ಈ ಯೋಜನೆಯನ್ನು ರಾಜ್ಯ ಸರ್ಕಾರ ಇದೇ ಡಿಸೆಂಬರ್‌ನಲ್ಲಿ ಜಾರಿ ಮಾಡೋದಾಗಿ ಹೇಳಿದೆ. ಈ ಬಗ್ಗೆ ದಾವಣಗೆರೆಯಲ್ಲಿ ಸಚಿವ ಕೆ.ಹೆಚ್‌.ಮುನಿಯಪ್ಪ ಹೇಳಿದ್ದಾರೆ.

 

Share Post