DistrictsHealth

ಕರ್ತವ್ಯದಲ್ಲಿದ್ದಾಗಲೇ ಕುಸಿದುಬಿದ್ದ ಸಾವನ್ನಪ್ಪಿದ ಯುವ ವೈದ್ಯ

ರಾಯಚೂರು; ಇತ್ತೀಚೆಗೆ ಹಠಾತ್‌ ಹೃದಯಾಘಾತಗಳು ಹೆಚ್ಚಾಗುತ್ತಿವೆ. ಅದ್ರಲ್ಲೂ ಸಣ್ಣ ವಯಸ್ಸಿನವರಲ್ಲಿ ಹೃದಯಾಘಾತಗಳು ಜಾಸ್ತಿಯಾಗುತ್ತಿವೆ. ಹಠಾತ್‌ ಹೃದಯಾಘಾತಕ್ಕೆ ರಾಯಚೂರಿನಲ್ಲಿ ಯುವ ವೈದ್ಯರೊಬ್ಬರು ಸಾವನ್ನಪ್ಪಿದ್ದಾರೆ. 

ಮೂವತ್ನಾಲ್ಕು ವರ್ಷದ ಜನರಲ್‌ ಸರ್ಜನ್‌ ಡಾ.ಚಂದ್ರಶೇಖರ ಮಾದಿನೂರು ಹೃದಯಘಾತಕ್ಕೆ ಬಲಿಯಾದ ವೈದ್ಯ. ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಅಕ್ಕಮಹಾದೇವಿ ಆಸ್ಪತ್ರೆಯಲ್ಲಿ ಇವರು ಕೆಲಸ ಮಾಡುತ್ತಿದ್ದರು. ಕರ್ತವ್ಯದಲ್ಲಿರುವಾಗಲೇ ಅವರು ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದ ಚಂದ್ರಶೇಖರ್‌ ಅವರು, ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಸ್ವಲ್ಪ ಆಯಾಸ ಇದ್ದಿದ್ದರಿಂದ ಅವರು ಮನೆಗೆ ಹೋಗಿ ವಿಶ್ರಾಂತಿ ಪಡೆಯುತ್ತೇನೆ ಎಂದು ಹೊರಟಿದ್ದಾರೆ. ಆದ್ರೆ, ಆಸ್ಪತ್ರೆಯ ಮೆಟ್ಟಿಲು ಹತ್ತುವಾಗಲೇ ಕುಸಿದುಬಿದ್ದಿದ್ದಾರೆ.

ಆಸ್ಪತ್ರೆಯ ಮೇಲ್ಮಹಡಿಯಲ್ಲೇ ಅವರ ಮನೆ ಇತ್ತು. ಆದ್ರೆ ಮೇಲೆ ಹೋಗುವುದರೊಳಗೆ ಅವರು ಜೀವ ಕಳೆದುಕೊಂಡಿದ್ದಾರೆ.

 

 

Share Post