CrimeDistricts

ಮಳೆಗೆ ಗೋಡೆ ಕುಸಿತ; ಎರಡು ಪ್ರತೇಕ ಪ್ರಕರಣಗಳಲ್ಲಿ ಇಬ್ಬರು ಮಕ್ಕಳು ಬಲಿ..!

ಬೆಂಗಳೂರು; ಕಳೆದ ಕೆಲ ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಇದರಿಂದಾಗಿ ನಾನಾ ಅನಾಹುತಗಳು ನಡೆಯುತ್ತಿದೆ. ಹಲವೆಡೆ ಪ್ರಾಣಹಾನಿ ಕೂಡಾ ಸಂಭವಿಸುತ್ತಿದೆ. ನಿನ್ನೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮನೆ ಗೋಡೆ ಕುಸಿದು ಇಬ್ಬರು ಪುಟಾಣಿ ಮಕ್ಕಳು ಸಾವನ್ನಪ್ಪಿದ್ದಾರೆ. ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಈ ದುರ್ಘಟನೆಗಳು ನಡೆದಿದ್ದು, ಸ್ಪೂರ್ತಿ ಹಾಗೂ ಭಾಗ್ಯ ಚಳಮರದ ಎಂಬ ಇಬ್ಬರು ಮಕ್ಕಳೇ ಸಾವನ್ನಪ್ಪಿರುವವರು.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದ್ದು, ಸ್ಫೂರ್ತಿ ಎಂಬ ಒಂದು ವರ್ಷ ಮಗು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾಳೆ. ತಂದೆ-ತಾಯಿ ಜೊತೆ ಮಲಗಿದ್ದ ವೇಳೆ ಗೋಡೆ ಕುಸಿದಿದ್ದು, ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆಕೆಯ ತಂದೆ-ತಾಯಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೊಂದೆಡೆ ಹಾವೇರಿ ಜಿಲ್ಲೆ ಮಾಳಾಪುರದಲ್ಲಿ ಮೂರು ವರ್ಷದ ಬಾಲಕಿ ಭಾಗ್ಯ ಚಳಮರದ ಸಾವನ್ನಪ್ಪಿದ್ದಾಳೆ. ಮನೆಯಲ್ಲಿದ್ದಾಗ ಗೋಡೆ ಕುಸಿದು ಈ ದುರ್ಘಟನೆ ನಡೆದಿದೆ.

 

Share Post