Districts

ಮಳೆಯಿಂದ ಗೋಡೆ ಕುಸಿತ; ಸಂಬಂಧಿಕರ ಮನೆಗೆ ಬಂದಿದ್ದ ಬಾಲಕ ಸಾವು!

ಮಂಗಳೂರು; ಮಳೆಯಿಂದಾಗಿ ರಾಜ್ಯದಲ್ಲಿ ಅವಾಂತರಗಳು ಸೃಷ್ಟಿಯಾಗುತ್ತಲೇ ಇವೆ.. ದಿನವೂ ಒಂದಿಲ್ಲೊಂದು ಅನಾಹುತಗಳು ನಡೆಯುತ್ತಿವೆ.. ಕಳೆದ ರಾತ್ರಿ ಕೂಡಾ ಮೆನಯೊಂದು ಕುಸಿದುಬಿದ್ದಿದ್ದು, 17 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಬಳಿಯ ಜೋಕಟ್ಟೆಯಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ಕಪ್ಪು ಅರಿಶಿಣ ನೋಡಿದ್ದೀರಾ..?; ಇದನ್ನು ಬಳಸುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ..?

ಕಳೆದ ರಾತ್ರಿ ಜೋಕಟ್ಟೆ ಸುತ್ತಮುತ್ತ ಭಾರೀ ಮಳೆಯೊಂದಿಗೆ ಜೋರಾದ ಗಾಳಿ ಕೂಡಾ ಬೀಸಿದೆ.. ಇದರಿಂದಾಗಿ ಜೋಕಟ್ಟೆಯ ಮನೆಯೊಂದು ಕುಸಿದುಬಿದ್ದಿದ್ದು, ಮನೆಯಲ್ಲಿ ಮಲಗಿದ್ದ 17 ವರ್ಷದ ಶೈಲೇಶ್‌ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಈತ ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಎಂದು ತಿಳಿದುಬಂದಿದೆ.. ಶೈಲೇಶ್‌ ಜೋಕಟ್ಟೆಯ ಸಂಬಂಧಿಕರ ಮನೆಗೆ ಬಂದಿದ್ದ.. ಈ ವೇಳೆ ಈ ದುರ್ಘಟನೆ ನಡೆದಿದೆ.. ಮನೆಯ ಪಕ್ಕದ ತಡೆಗೋಡೆ ಕುಸಿದಿದ್ದರಿಂದ ಅದರಡಿ ಸಿಲುಕಿ ಶೈಲೇಶ್‌ ಮೃತಪಟ್ಟಿದ್ದಾನೆ..

ಇದನ್ನೂ ಓದಿ; ಮುಡಾ, ವಾಲ್ಮೀಕಿ ನಿಗಮ ಹಗರಣ; ಬಿಜೆಪಿ-ಜೆಡಿಎಸ್‌ನಿಂದ ಅಹೋರಾತ್ರಿ ಧರಣಿ

Share Post