DistrictsPolitics

ವರುಣಾದಲ್ಲಿ ಪ್ರಚಾರ ಮಾಡ್ತಾರೆ ವಿಜಯೇಂದ್ರ; ಸೋಮಣ್ಣಗೆ ವರವಾಗುತ್ತಾ..?

ಮೈಸೂರು; ಕಳೆದ ಚುನಾವಣೆಯಲ್ಲಿಯೇ ಬಿಎಸ್‌ವೈ ಪುತ್ರ ವಿಜಯೇಂದ್ರ ಅವರು ವರುಣಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸಿದ್ದರು. ಗೆಲ್ಲುವ ಸಾಧ್ಯತೆ ಇದ್ದರೂ ವಿಜಯೇಂದ್ರಗೆ ಟಿಕೆಟ್‌ ನೀಡಿರಲಿಲ್ಲ. ಈ ಬಾರಿಯೂ ಕ್ಷೇತ್ರದ ಬಯಸಿದರೂ ವಿಜಯೇಂದ್ರ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡಿದ್ದಾರೆ. ಇದರಿಂದಾಗಿ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರ ಮಾಡೋದಿಲ್ಲ ಎಂಬ ಸುದ್ದಿ ಹರಿದಾಡುತ್ತಿತ್ತು. ಆದ್ರೆ ಇದೀಗ ವಿಜಯೇಂದ್ರ ಅವರೇ ವರುಣಾದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ.

ವರುಣಾ ಕ್ಷೇತ್ರದಲ್ಲೂ ಲಿಂಗಾಯತ ಮತಗಳು ಹೆಚ್ಚಿವೆ. ಲಿಂಗಾಯತ ಮತಗಳನ್ನು ಒಗ್ಗೂಡಿಸಿದರೆ ಸಿದ್ದರಾಮಯ್ಯಗೆ ಫೈಟ್‌ ಕೊಡಬಹುದು. ಹೀಗಾಗಿ ವಿಜಯೇಂದ್ರ ಪ್ರಚಾರ ಮಾಡಿದರೆ ಅನುಕೂಲ ಆಗುತ್ತೆ ಅಂತ ವರುಣಾ ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದರು. ಈ ನಡುವೆ ವಿಜಯೇಂದ್ರ ಅವರು ನಾನು ಸೋಮಣ್ಣ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದರಿಂದಾಗಿ ವರುಣಾ ಕ್ಷೇತ್ರ ಕಣ ರಂಗೇರಲಿದೆ.

Share Post