CrimeDistricts

ಮದುವೆಗೆ ನೋ ಎಂದ ಪ್ರಿಯಕರ; ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವತಿ!

ಕಲಬುರಗಿ; ಪ್ರೀತಿಸಿ, ಹಲವು ವರ್ಷ ಜೊತೆಗೆ ಸುತ್ತಾಡಿದ್ದ ಪ್ರಿಯಕರ ಮದುವೆ ಅಂತ ಬಂದಾಗ ನೋ ಎಂದುಬಿಟ್ಟಿದ್ದಾನೆ.. ಇದರಿಂದ ನೊಂದ ಪ್ರಿಯತಮೆ ನೇಣಿಗೆ ಶರಣಾಗಿದ್ದಾಳೆ.. ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ..

ಆಳಂದ ತಾಲೂಕಿನ ಕೌಲಗಾ ಗ್ರಾಮದ ಪುಷ್ಪಾ (26) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಯುವತಿ.. ಈಕೆ ಕಲಬುರಗಿ  ಯಲ್ಲಾಲಿಂಗ ಕಾಲೋನಿಯಲ್ಲಿ ಬಾಡಿಗೆ ರೂಂನಲ್ಲಿ ವಾಸವಿದ್ದಳು. ಅದೇ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾಳೆ.. UPSCಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಪುಷ್ಪಾ ನಾಲ್ಕು ವರ್ಷಗಳಿಂದ ಗಾಂಧಿನಗರ ನಿವಾಸಿ ಕಿರಣ್ ಎಂಬಾತನನ್ನು ಪ್ರೀತಿಸುತ್ತಿದ್ದಳು.. ಇಬ್ಬರೂ ಅಲ್ಲಿ ಇಲ್ಲಿ ಸುತ್ತಾಡಿದ್ದರು..

ಕೆಲದಿನಗಳಿಂದ ಪುಷ್ಪ ಮದುವೆ ಮಾಡಿಕೊಳ್ಳುವಂತೆ ಕಿರಣ್‌ಗೆ ಒತ್ತಾಯ ಮಾಡಿದ್ದಾಳೆ.. ಆದ್ರೆ ಜಾತಿ ಬೇರೆಯಾಗಿರುವುದರಿಂದ ಮನೆಯವರು ಒಪ್ಪುತ್ತಿಲ್ಲ ಅಂತ ಮದುವೆಗೆ ಆತ ನೋ ಎಂದಿದ್ದಾನೆ.. ಇದರಿಂದ ಮನನೊಂದ ಪುಷ್ಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..

ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ..

Share Post