CrimeDistricts

ಕೆರೆಯಲ್ಲಿ ಆಕಸ್ಮಿಕವಾಗಿ ಮುಳುಗಿ ನಾಲ್ವರು ದಾರುಣ ಸಾವು

ಹರಪನಹಳ್ಳಿ; ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಚನ್ನಹಳ್ಳಿ ತಾಂಡಾ ಬಳಿ ದುರಂತವೊಂದು ನಡೆದಿದೆ. ಕೆರೆ ನೋಡುಲು ಹೋಗಿದ್ದ ನಾಲ್ವರು ನೀರುಪಾಲಾಗಿದ್ದಾರೆ. ಅಕ್ಕ, ತಮ್ಮ ಸೇರಿ ನಾಲ್ವರು ನೀರಿಗೆ ಆಹುತಿಯಾಗಿದ್ದಾರೆ.

ನಂದಿಬೇವೂರು ತಾಂಡಾ ನಿವಾಸಿಗಳಾದ ಅಶ್ವಿನಿ(17), ಆಕೆಯ ಸಹೋದರ ಅಭಿಷೇಕ್(14), ಚೆನ್ನಹಳ್ಳಿ ತಾಡಾದ ಕಾವ್ಯಾ(19) ಹಾಗೂ ತುಂಬಿನಕೇರಿ‌ ತಾಂಡಾದ ಅಪೂರ್ವ(14) ಕೆರೆ ಪಾಲಾಗಿರುವವರು. ಈಗಾಗಲೇ ಇಬ್ಬರು ಮೃತದೇಹಗಳನ್ನು ಹೊರೆತೆಗೆಯಲಾಗಿದೆ. ಉಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಅಶ್ವಿನಿ ಹಾಗೂ ಆಕೆಯ ಸಹೋದರ ಅಭಿಷೇಕ್‌ ಸಂಬಧಿಕರ ಮನೆಗೆ ಬಂದಿದ್ದರು. ಈ ವೇಳೆ ಎಲ್ಲರೂ ತುಂಬಿದ್ದ ಕೆರೆಯನ್ನು ನೋಡಲು ಹೋಗಿದ್ದರು. ಈ ವೇಳೆ ಅಭಿಷೇಕ್‌ ಕಾಲುಜಾರಿ ಕೆರೆಗೆ ಬಿದ್ದಿದ್ದಾನೆ. ಆತನನನ್ನು ರಕ್ಷಿಸಲು ಉಳಿದ ಮೂವರು ಇಳಿದಿದ್ದು, ಎಲ್ಲರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Share Post