BengaluruCrime

ಜಿಹಾದ್‌ ವಿರುದ್ಧ ಹೋರಾಟಕ್ಕೆ ವ್ಯವಸ್ಥೆ ಸಿದ್ಧವಾಗಬೇಕು; ಸಿ.ಟಿ.ರವಿ

ಬೆಂಗಳೂರು; ಜಿಹಾದ್‌ ಕಿತ್ತು ಹಾಕಲು ನಾವು ಬದ್ಧರಿದ್ದೇವೆ. ಜಿಹಾದ್‌ ವಿರುದ್ಧ ಹೋರಾಡಲು ವ್ಯವಸ್ಥೆ ಸಿದ್ಧಗೊಳ್ಳಬೇಕು ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದಾರೆ. ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಜಿಹಾದಿ ಮಾನಸಿಕತೆಗೆ ಕೊನೆ ಇಲ್ಲವೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕರ್ತರ ಭಾವನೆಗಳ ಜೊತೆ ನಾವಿದ್ದೇವೆ. ಚಂದ್ರ, ಹರ್ಷ, ಪ್ರವೀಣ್‌ ಆಯ್ತು. ನಾಳೆ ಇನ್ಯಾರೋ. ಹೀಗಾಗಿ ಸೂಕ್ತ ಕ್ರಮ ಕೈಗೊಂಡರೆ ಮಾತ್ರ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬಹುದು. ಆ ಬಗ್ಗೆ ಸಿಎಂ ಜೊತೆ ನಾನು ಚರ್ಚೆ ಮಾಡುತ್ತೇನೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

 

 

Share Post