Districts

ಮಲ್ಪೆಯಲ್ಲಿ ಕೇರಳದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲು

ಉಡುಪಿ: ಉಡುಪಿಯ ಮಲ್ಪೆ ಬೀಚ್‌ನಲ್ಲಿ ದುರ್ಘಟನೆಯೊಂದು ನಡೆದಿದೆ. ಕೇರಳದ ಕೊಟ್ಟಾಯಂನಿಂದ ಸೇಂಟ್ ಮೇರಿಸ್‌ ಐಲ್ಯಾಂಡ್‌ಗೆ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬಂದಿದ್ದಾರು. ಇವರಲ್ಲಿ ಮೂವರು ನೀರುಪಾಲಾಗಿದ್ದಾರೆ.

ಅಲನ್‌ ರೆಜಿ (22), ಅಮಲ್ ಸಿ.ಅನಿಲ್ (22), ಅಂಥೋನಿ ಶೆಣೈ (21) ಸಮುದ್ರ ಪಾಲಾದವರು. ಸದ್ಯ ಇಬ್ಬರು ಮೃತದೇಹಗಳು ಪತ್ತೆಯಾಗಿವೆ. ಆದ್ರೆ, ಅಂಥೋಣಿ ಶೆಣೈ ಎಂಬ ವಿದ್ಯಾರ್ಥಿ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಪಟ್ಟಾಯಂನ ಮಂಗಳ ಎಂಜಿನಿಯರಿಂಗ್ ಕಾಲೇಜಿನಿಂದ 42 ವಿದ್ಯಾರ್ಥಿಗಳು ಹಾಗೂ ಇಬ್ಬರು ಪ್ರಾಧ್ಯಾಪಕರು ಪ್ರವಾಸಕ್ಕೆ ಬಂದಿದ್ದರು. ಈಜುವಾಗ ದುರ್ಘಟನೆ ಸಂಭವಿಸಿದೆ.

Share Post