CrimeDistricts

ಬೈಕ್‌ಗೆ ಟಿಪ್ಪರ್‌ ಡಿಕ್ಕಿ; ಒಂದೇ ಕುಟುಂಬದ ಮೂವರು ಬಲಿ..!

ಬಳ್ಳಾರಿ; ಬಳ್ಳಾರಿ ನಗರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೌಲ್‌ ಬಜಾರ್‌ ಪ್ರದೇಶಕ್ಕೆ ಹೋಗುವ ಓವರ್‌ ಬ್ರಿಡ್ಜ್ ಬಳಿ ಬೈಕ್‌ಗೆ ಹಿಂದಿನಿಂದ ಟಿಪ್ಪರ್‌ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.

  ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.  ಮೃತರು ಮೂರಾರ್ಜಿ ದೇಸಾಯಿ ಶಾಲೆಯ ಶಿಕ್ಷಕ ವೀರೇಶ್‌(40), ಆತನ ಪತ್ನಿ ಅಂಜಲಿ(35), ಮಗ (6) ದಿನೇಶ್‌ ಎಂದು ಗುರುತಿಸಲಾಗಿದೆ. ಯರಗುಡಿಯಿಂದ ಬಳ್ಳಾರಿಯ ಗಫೂರ್‌ ಟವರ್‌ ಬಳಿ ಇರುವ ತಮ್ಮ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದರು. ನಗರದ ಏಳುಮಕ್ಕಳು ತಾಯಿಯಮ್ಮ ಗುಡಿ ಎದುರುಗಡೆಯಿಂದ ಓವರ್‌ ಬ್ರಿಡ್ಜ್‌ ಕಡೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಟಿಪ್ಪರ್‌ ಬೈಕ್​ಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಬಾಲಕಿ ಹನಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Share Post