CrimeDistricts

ಮಠದ ವಸತಿ ಶಾಲೆಯ ಮೂವರು ವಿದ್ಯಾರ್ಥಿಗಳು ನಾಪತ್ತೆ; ಎಲ್ಲಿಗೆ ಹೋದರು..?

ರಾಮನಗರ; ರಾಮನಗರ ಜಿಲ್ಲೆ ಕನಕಪುರದ ದೇಗುಲ ಮಠದ ನಿರ್ವಾಣ ಸ್ವಾಮಿ ವಸತಿ ಶಾಲೆಯಲ್ಲಿ ಮೂವರು ವಿದ್ಯಾರ್ಥಿಗಳು ಮಂಗಳವಾರದಿಂದ ನಾಪತ್ತೆಯಾಗಿದ್ದು, ತಡವಾಗಿ ವಿಚಾರ ಬೆಳಕಿಗೆ ಬಂದಿದೆ. ಮಂಗಳವಾರ ವಸತಿ ನಿಲಯದ ಆವರಣದ ಶಾಲೆಗೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ಮತ್ತೆ ಹಾಸ್ಟೆಲ್‌ಗೆ ವಾಪಸ್‌ ಬಂದಿಲ್ಲ. ಈ ಸಂಬಂಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೇಗುಲ ಮಠದ ವಸತಿ ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ನವೆಂಬರ್‌ 8ರಂದು ಎಲ್ಲಾ ಮಕ್ಕಳಂತೆ 9ನೇ ತರಗತಿಯ ಮೂವರು ವಿದ್ಯಾರ್ಥಿಗಳು ಶಾಲೆಗೆ ಹೊಗಿದ್ದರು. ಆದ್ರೆ ಅವರು ತರಗತಿಗೆ ಹಾಜರಾಗದೇ ನಾಪತ್ತೆಯಾಗಿದ್ದಾರೆ. ಎಲ್ಲಿ ಹುಡುಕಿದರೂ ಸಿಕ್ಕಿಲ್ಲ. ಅತ್ತಿಬೆಲೆ ಗ್ರಾಮದ ಅನೀಲ್ ಕುಮಾರ್‌ ಮಗ ಶಿವಕುಮಾರ್(15), ಬೆಂಗಳೂರಿನ ಬಿಡಿಎ ಲೇಔಟ್ ನಿವಾಸಿ ಮಹದೇವ್ ಪುತ್ರ ಕಾರ್ತಿಕ್(15), ಅತ್ತಿಬೆಲೆ ತಾಲೂಕಿನ ಕೊಡ್ಲಿಪುರ ಗ್ರಾಮದ ಮಂಜುನಾಥ್ ಪುತ್ರ ಪ್ರತಾಪ್ (16) ಎಂಬ ನಾಪತ್ತೆಯಾಗಿರುವವರು.

 

Share Post