BengaluruCrime

ಪತ್ನಿ ಮೇಲೆ ಹತ್ಯಾ ಪ್ರಯತ್ನ, ಅಡ್ಡ ಬಂದ ಮಗಳ ಮೇಲೆ ಕುದಿಯುವ ಎಣ್ಣೆ ಎರಚಿ ಹಲ್ಲೆ

ಬೆಂಗಳೂರು: ತನ್ನ ಪತ್ನಿಯನ್ನು ಹತ್ಯೆ ಮಾಡುವ ನಿಟ್ಟಿನಲ್ಲಿ ಕುದಿಯುವ ಎಣ್ಣೆಯ ನ್ನು ಎರಚಿ ಹಲ್ಲೆ ಮಾಡಿರುವ ಘಟನೆ ನಗರದ ಆಡುಗೋಡಿ ಸಮೀಪದ ಎಲ್‌.ಆರ್.ನಗರದಲ್ಲಿ ನಡೆದಿದೆ. ತಾಯಿಯನ್ನು ಕಾಪಾಡಲು ಬಂದ ಹದಿಮೂರು ವರ್ಷದ ಮಗಳ ಮೇಲೂ ಪಾಪಿ ತಂದೆ ಕುದಿಯುವ ಎಣ್ಣೆ ಎರಚಿದ್ದಾನೆ. ತಾಯಿ-ಮಗಳು ಕಿರುಚಾಡಿದ ಶಬ್ದ ಕೇಳಿ ಅಕ್ಕ-ಪಕ್ಕದ ಮನೆಯವರು ಬರುತ್ತಿದ್ದಂತೆ ಥಾಮಸ್‌ ಮನೆಯಿಂದ ಪರಾರಿಯಾಗಿದ್ದಾನೆ.

ಇನ್ನೂ ಇಬ್ಬನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ಪತಿಯನ್ನು ಕೊಲ್ಲಲು ಥಾಮಸ್‌ ಈ ಕೆಲಸ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ಆಚೆ ತನ್ನ ಪಾಡಿಗೆ ಕುಳಿತಿದ್ದ ಪತ್ನಿಗೆ ಬಿಸಿ ನೀರು ಕಾಯಿಸಿಕೊಳ್ಳುವುದಾಗಿ ಹೇಳಿ ಅಡುಗೆ ಮನೆಗೆ ತೆರಳಿದ್ದಾನೆ. ಹಿಂದೆಯಿಂದ ಬಂದು ತಲೆಗೆ ಬಲವಾಗಿ ಹೊಡೆದು ಕಾದ ಬಿಸಿ ಎಣ್ಣೆಯನ್ನು ಎರಚಿದ್ದಾನೆ. ಹೆತ್ತವರ ಗಲಾಟೆ ಬಿಡಿಸಲು ಬಂದ ಮಗಳ ಮೇಲೂ ಕಾದಿರುವ ಎಣ್ಣೆ ಎರಚಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಥಾಮಸ್‌ನನ್ನು ಹಿಡಿದು ಥಳಿಸಿರುವ ಪೊಲೀಸರು ಕೊಲೆ ಮಾಡಲೆಂದೇ ಹೀಗೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

 

Share Post