CrimeDistricts

ಪತ್ನಿಯ ಕತ್ತು ಕುಯ್ದು ಕತ್ತಿ ಹಿಡಿದು ನರ್ತನೆ ಮಾಡಿದ ಪಾಪಿ ಪತಿ!

ಉಡುಪಿ; ಪಾಪಿ ಗಂಡನೊಬ್ಬ ಕಂಠಪೂರ್ತಿ ಕುಡಿದು ಪತ್ನಿಯ ಜೊತೆ ಜಗಳವಾಡಿ ಆಕೆಯ ಕುತ್ತಿಗೆ ಕುಯ್ದು ಆಕೆಯ ಮುಂದೆ ನರ್ತನೆ ಮಾಡಿದ್ದಾನೆ.. ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಬಸ್ರೂರು ಗ್ರಾಮದಲ್ಲಿ ನಡೆದಿದೆ.. ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ..

ಇದನ್ನೂ ಓದಿ; ಬ್ಯಾಂಕ್‌ ಕಳುವಿಗೆ ಯತ್ನಿಸಿ ವಿಫಲವಾದ ಮಹಿಳೆ!

ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದ ಲಕ್ಷ್ಮಣ(ರಮೇಶ್‌) ಹಾಗೂ ಪತ್ನಿ ಅನಿತಾ ಆರು ತಿಂಗಳ ಹಿಂದೆ ಕಾಶಿಮಠದ ತೋಟ ನೋಡಿಕೊಳ್ಳಲು ಬಂದಿದ್ದರು.. ಬಸ್ರೂರಿನ ಕಾಶಿ ಮಠಕ್ಕೆ ಸೇರಿದ ರೆಸಿಡನ್ಶಿಯಲ್‌ ಬ್ಲಾಕ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.. ಕಳೆದ ರಾತ್ರಿ ಕುಡಿದು ಮನೆಗೆ ಬಂದಿರುವ ಲಕ್ಷ್ಮಣ, ಪತ್ನಿ ಅನಿತಾ ಕತ್ತನ್ನು ಕತ್ತಿಯಿಂದ ಕುಯ್ದಿದ್ದಾನೆ.. ನಂತರ ಕತ್ತಿ ಹಿಡಿದು ಡ್ಯಾನ್ಸ್‌ ಮಾಡಿದ್ದಾನೆ.. ಈ ದೃಶ್ಯಗಳನ್ನು ಯಾರೋ ಸೆರೆಹಿಡಿದಿದ್ದಾರೆ.. ಸದ್ಯ ಅನಿತಾಳನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.. ಸ್ಥಳಕ್ಕೆ ಬಂದ ಪೊಲೀಸರು ಅಶ್ರುವಾಯು ಸಿಡಿಸಿ, ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ..

ಇದನ್ನೂ ಓದಿ; ಸಿದ್ದರಾಮಯ್ಯ ಅವರೇ ಇನ್ನು 10 ತಿಂಗಳ ಸಿಎಂ ಆಗಿರಿ ನೋಡೋಣ; ಕುಮಾರಸ್ವಾಮಿ ಸವಾಲು!

Share Post