CrimeDistricts

ಎಸಿಬಿ ಅಧಿಕಾರಿಗಳ ಸೋಗಿನಲ್ಲಿ ವಂಚನೆ ಯತ್ನ; ಖದೀಮರು ಸಿಕ್ಕಿಬಿದ್ದಿದ್ದು ಹೇಗೆ..?

ಕೋಲಾರ; ಎಸಿಬಿ ಅಧಿಕಾರಿಗಳೆಂದು ಹೇಳಿಕೊಂಡು ಅಧಿಕಾರಿಯೊಬ್ಬರಿಂದ ಹಣ ವಸೂಲಿಗೆ ಮುಂದಾಗಿದ್ದ ಮೂವರು ನಕಲಿ ವೀರರನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಲೆಗೆ ಕೆಡವಿದ್ದಾರೆ. ಕೋಲಾರದ ನಿರ್ಮಿತಿ ಕೇಂದ್ರದ ಯೋಜನಾ‌ ಅಧಿಕಾರಿ ನಾರಾಯಣಗೌಡ ಅವರನ್ನು ಮೂವರು ವ್ಯಕ್ತಿಗಳು ಸಂಪರ್ಕಿಸಿದ್ದರು. ಯಾವು ಎಸಿಬಿ ಅಧಿಕಾರಿಗಳೆಂದೂ, ನಿಮ್ಮ ವಿರುದ್ಧ ಹಲವು ಆರೋಪಗಳಿವೆ. ಹೀಗಾಗಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಬಂದಿದ್ದೇವೆ. ಹಣ ಕೊಟ್ಟರೆ ಸುಮ್ಮನೆ ಬಿಡುತ್ತೇವೆ ಎಂದು ಬೇಡಿಕೆ ಇಟ್ಟಿದ್ದರಂತೆ.

ಆದರೆ ಈ ಬಗ್ಗೆ ಅನುಮಾನಗೊಂಡ ಅಧಿಕಾರಿ ನಾರಾಯಣಗೌಡ ಅವರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಅವರು ನಕಲಿ ಎಂಬುದು ಗೊತ್ತಾಗಿದೆ. ಬೆಳಗಾವಿಯ ಮುರಿಗಪ್ಪ, ಹಾಸನ ಜಿಲ್ಲೆ ಸಕಲೇಶಪುರದ ರಜನಿಕಾಂತ್ ಹಾಗೂ ಮಹಾರಾಷ್ಟ್ರದ ರಾಜೇಶ್ ಬಂಧಿತ ಆರೋಪಿಗಳು. ಈ ಮೂವರು ಆರೋಪಿಗಳ ವಿರುದ್ಧ ಇಂಥದ್ದೇ ಹಲವು ಪ್ರಕರಣಗಳು ವಿವಿಧೆಡೆ ದಾಖಲಾಗಿವೆ.

Share Post