CrimeDistricts

ರಾಯಚೂರಿನಲ್ಲಿ ಮನೆಗೋಡೆ ಕುಸಿತ; ಮೂವರ ದುರ್ಮರಣ

ರಾಯಚೂರು; ಮಾನ್ವಿ ತಾಲ್ಲೂಕಿನ ಕುರಡಿ ಗ್ರಾಮದಲ್ಲಿ ಭಾರಿ ಮಳೆ ಮೂವರನ್ನು ಬಲಿ ಪಡೆದಿದೆ. ಕೆಲ ದಿನಗಳಿಂದ ಗ್ರಾಮದಲ್ಲಿ ಸುರಿಯುತ್ತಿರುವ ಸತತ ಮಳೆಗೆ ಮನೆ ಗೋಡೆ ಕುಸಿದಿದ್ದು, ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

ಪರಮೇಶ (45),‌ ಪರಮೇಶ್ ಪತ್ನಿ ಜಯಮ್ಮ (39) ಹಾಗೂ ಪರಮೇಶನ ತಮ್ಮನ ಮಗ ನಾಲ್ಕು ವರ್ಷದ ಭರತ್ ಮೃತ ದುರ್ದೈವಿಗಳು. ಮನೆಯಲ್ಲಿ ಮಲಗಿದ್ದಾಗ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮನೆ ಗೋಡೆ ಕುಸಿದು ಅವಘಡ ನಡೆದಿದೆ.

Share Post