CrimeDistricts

Bedroom Murder; ಬೆಡ್‌ರೂಮ್‌ಗೆ ಬಂದ ಅಪರಿಚಿತ; ಮೈದುನನ ಕೈಗೆ ಸಿಕ್ಕಾತ ಮಟಾಷ್‌!

ಚಿಕ್ಕಬಳ್ಳಾಪುರ; ಅನುಮತಿ ಇಲ್ಲದೆ ಅಪರಿಚಿತರು ಮನೆಯ ಕಾಂಪೌಂಡ್‌ ಒಳಗೂ ಬರೋದಕ್ಕೆ ಆಗೋದಿಲ್ಲ.. ಆದ್ರೆ ಇಲ್ಲೊಬ್ಬ ಆಸಾಮಿ ನೇರವಾಗಿ ಬೆಡ್‌ ರೂಮ್‌ಗೇ ಬಂದಿದ್ದಾರೆ. ಒಂಟಯಾಗಿ ವಾಸವಿದ್ದ ಮಹಿಳೆಯ ಮನೆಗೆ ಬಂದ ವ್ಯಕ್ತಿ, ನೇರವಾಗಿ ಬೆಡ್‌ರೂಮ್‌ಗೆ ನುಗ್ಗಿದ್ದಾರೆ. ಅನಂತರ ನಡೆದಿದ್ದೇ ರಣಭೀಕರ ಸನ್ನಿವೇಶ. ಏಕಾಏಕಿ ಬೆಡ್‌ರೂಮ್‌ಗೆ ನುಗ್ಗಿದ್ದಕ್ಕಾಗಿ ಆ ಅಪರಿಚಿತ ಅಲ್ಲಿಯೇ ಕೊಲೆಯಾಗಿ ಹೋಗಿದ್ದಾನೆ. ಮಹಿಳೆಯ ಮೈದುನ ಆ ವ್ಯಕ್ತಿಯನ್ನು ರಾಡ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ; Smile Designing Surgery; ಸ್ಮೈಲ್‌ ಹೆಚ್ಚಿಸೋ ಸರ್ಜರಿ; ಮದುವೆಗೂ ಮುನ್ನವೇ ಹೋಯ್ತು ಪ್ರಾಣ!

ನೇರ ಬೆಡ್‌ರೂಮ್‌ಗೆ ನುಗ್ಗದ ವ್ಯಕ್ತಿ;

ನೇರ ಬೆಡ್‌ರೂಮ್‌ಗೆ ನುಗ್ಗದ ವ್ಯಕ್ತಿ; ಕಳೆದ ರಾತ್ರಿ ಚಿಕ್ಕಬಳ್ಳಾಪುರದ ಇಂದಿರಾನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಚಿಕ್ಕಬಳ್ಳಾಪುರದ ಇಂದಿರಾನಗರದ ಮನೆಯಲ್ಲಿ ಆಶಾ ಎಂಬ ಗೃಹಿಣಿ ಒಂಟಿಯಾಗಿ ಜೀವನ ಮಾಡುತ್ತಾರೆ. ಈಕೆಯ ಮನೆಗೆ ಮೂವತ್ತೈದು ವರ್ಷದ ಆಂಜಿನಪ್ಪ ಎಂಬಾತ ನುಗ್ಗಿದ್ದಾನೆ. ನೇರವಾಗಿ ಆಕೆಯ ಬೆಡ್‌ರೂಮ್‌ಗೇ ಬಂದುಬಿಟ್ಟಿದ್ದಾನೆ. ಇದರಿಂದಾಗಿ ಮಹಿಳೆ ಆಶಾ ಗಾಬರಿಯಾಗಿದ್ದಾಳೆ. ಕೂಡಲೇ ಆಕೆ ತನ್ನ ಮೈದುನ ರಾಘವೇಂದ್ರಗೆ ಫೋನ್‌ ಮಾಡಿ ವಿಷಯ ತಿಳಿಸಿದ್ದಾಳೆ. ಸ್ಥಳಕ್ಕೆ ಬಂದ ರಾಘವೇಂದ್ರ ಅಲ್ಲಿ ರಕ್ತದೋಕುಳಿಯನ್ನೇ ಹರಿಸಿದ್ದಾನೆ.

ಇದನ್ನೂ ಓದಿ; Loksabha; ಡಾ.ಸಿ.ಎನ್‌.ಮಂಜುನಾಥ್‌ ಸ್ಪರ್ಧೆ ಬಹುತೇಕ ಪಕ್ಕಾ; ಮಂಡ್ಯನಾ, ಗ್ರಾಮಾಂತರನಾ..?

ಕಬ್ಬಿಣದ ರಾಡ್‌ನಿಂದ ಹೊಡೆದು ಹಲ್ಲೆ;

ಕಬ್ಬಿಣದ ರಾಡ್‌ನಿಂದ ಹೊಡೆದು ಹಲ್ಲೆ; ಅತ್ತಿಗೆ ಕರೆ ಮಾಡುತ್ತಿದ್ದಂತೆ ಸ್ಥಳಕ್ಕೆ ಬಂದ ಮೈದುನ ರಾಘವೇಂದ್ರ ಆ ಅರಿಚಿತ ವ್ಯಕ್ತಿ ಆಂಜಿನಪ್ಪ ಜೊತೆ ಜಗಳಕ್ಕಿಳಿದಿದ್ದಾನೆ. ಇದು ವಿಕೋಪಕ್ಕೆ ತಿರುಗಿದೆ. ಇದರಿಂದ ರೊಚ್ಚಿಗೆದ್ದ ರಾಘವೇಂದ್ರ ಬೆಎಡ್‌ರೂಮ್‌ನಲ್ಲೇ ಕಬ್ಬಿಣದ ರಾಡ್‌ನಿಂದ ಆಂಜಿನಪ್ಪಗೆ ಹೊಡೆದಿದ್ದಾರೆ. ರಾಘವೇಂದ್ರ ಹೊಡೆದ ಏಟಿ, ಆಂಜಿನಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊಲೆ ಮಾಡಿದ ನಂತರ ಆರೋಪಿ ರಾಘವೇಂದ್ರ ನೇರವಾಗಿ ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ.

Share Post