CrimeDistricts

ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ದುರ್ಮರಣ

ಚಿತ್ರದುರ್ಗ; ಚಿತ್ರದುರ್ಗ ನಗರದಲ್ಲಿ ಇಂದು ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಟಾಟಾ ಇಂಡಿಕಾ ಕಾರೊಂದು ಇಲ್ಲಿನ ಪ್ರವಾಸಿ ಮಂದಿರದ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಘಟನೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಗಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೆದೆಹಳ್ಳಿಯ ಹರೀಶ್‌ ಹಾಗೂ ಸಚಿನ್‌, ಕಾಮಸಮುದ್ರದ ಮನು ಮೃತ ದುರ್ದೈವಿಗಳು. ಹಬ್ಬದ ಸಂಭ್ರದಲ್ಲಿದ್ದವರು ಮಸಣ ಸೇರಿದ್ದು, ಕುಟುಂಬಸ್ಥರಲ್ಲಿ ದುಖಃ ಮಡುಗಟ್ಟಿದೆ.

 

Share Post