DistrictsPolitics

ನನ್ನ ತುಳಿದ ಮೀನಿಗೆ ಗಾಳ ಹಾಕಿರ್ತಾರೆ ಅನ್ನೋದು ಗೊತ್ತಿಲ್ಲ; ಜನಾರ್ದನರೆಡ್ಡಿ ಹೀಗಂದಿದ್ದು ಯಾರಿಗೆ..?

ಹಾವೇರಿ; ನನ್ನನ್ನು ತುಳಿದ ಮೀನು ಆನಂದವಾಗಿ ಈಜಾಡುತ್ತಿದೆ. ಆದ್ರೆ ಆ ಮೀನಿಗೂ ಬಲೆ ಹಾಕಿರ್ತಾರೆ ಅನ್ನೋದು ಗೊತ್ತಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಜನಾರ್ದನರೆಡ್ಡಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ನಡೆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಾನು ದೂರವೇ ಉಳಿದಿದ್ದೆ. ನನ್ನನ್ನು ಕೆಲವರು ತುಳಿದರು. ನನಗೆ ತೊಂದರೆ ಕೊಟ್ಟರು. ನನಗೆ ತೊಂದರೆ ಕೊಟ್ಟವರು ಇಂದು ೨೦-೩೦ ಮಾತ್ರೆ ನುಂಗುತ್ತಿದ್ದಾರೆ. ಮಾತ್ರೆ ನುಂಗಿದರೆ ಮಾತ್ರ ಅವರಿಗೆ ನಿದ್ದೆ ಬರೋದು. ನನಗೆ ಮಾತ್ರೆ ನುಂಗದೆ ನಿದ್ದೆ ಬರುತ್ತೆ ಎಂದು ಜನಾರ್ದನರೆಡ್ಡಿ ಹೇಳಿದರು.

Share Post